ಈಶ್ವರಮಂಗಲ: ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುರುಳಿಮೂಲೆ ಎಂಬಲ್ಲಿ ನಡೆದ ಸರಕಾರಿ ಭೂಮಿಯ ಅತಿಕ್ರಮಣದ ತರಾಟೆಯ ನಂತರ ಹಲವಾರು ವಾದ ಪ್ರತಿವಾದಗಳು ನಡೆದವು. ಸ್ಥಳೀಯರ ಹಾಗೂ ಹಿಂದೂ ಕಾರ್ಯಕರ್ತರ ಹೋರಾಟದ ಬಳಿಕ ಸರ್ವೆಗಳು ನಡೆಯಿತು.
ಸರಕಾರಿ ವ್ಯವಸ್ಥೆಗಳಿಗೆ ಗ್ರಾಮ ಪಂಚಾಯತ್ ನಿರ್ಣಯ ಮಾಡಿದ ಜಾಗವನ್ನು ರಹೀಮ್ ಎಂಬಾತ ಅತಿಕ್ರಮಣ ಮಾಡಿ ಅಕ್ರಮ ಕಟ್ಟಡ ನಿರ್ಮಿಸಿದ್ದನು. ಅಲ್ಲಿಗೆ ಬೇಟಿ ನೀಡಿದ ಗ್ರಾಮ ಪಂಚಾಯತ್ ನ ಕೆಲ ಸದಸ್ಯರು ಹಾಗು ಆ ಭಾಗದ ನಾಗರೀಕರು, ಮಾನ್ಯ ಸಹಾಯಕ ಆಯುಕ್ತರು ಪುತ್ತೂರು ಹಾಗೂ ಮಾನ್ಯ ತಹಶೀಲ್ದಾರರು ಪುತ್ತೂರು ಇವರಿಗೆ ಇದರ ಬಗ್ಗೆ ದೂರು ನೀಡಿದ್ದರು
ಅದೇ ರೀತಿ ಇಂದು ದಿನಾಂಕ 30-11-24 ರಂದು ಮಾನ್ಯ ತಹಶಿಲ್ದಾರರು ಸ್ಥಳಕ್ಕೆ ಆಗಮಿಸಿ ಸರ್ವೆ ಇಲಾಖೆಯವರಲ್ಲಿ ಅಳತೆ ಮಾಡಿಸಿ ಆ ಜಾಗ ಕಂದಾಯ ಇಲಾಖೆಗೆ ಸೇರಿದ ಜಾಗ ಎಂದು ಖಚಿತಪಡಿಸಿದರು. ತದನಂತರ ಅಲ್ಲಿರುವ ಎರಡು ಅಕ್ರಮ ಕಟ್ಟಡವನ್ನು ನೆಲಸಮ ಪಡಿಸಲು ಆದೇಶ ನೀಡಿದರು. ಆದೇಶದಂತೆಯೇ ಕೂಡಲೇ ಅಕ್ರಮ ಕಟ್ಟಡಗಳು ನೆಲಸಮವಾದವು.
ಈ ಹೋರಾಟದಲ್ಲಿ ರೈತ ಸಂಘಟನೆಯ ನಾಯಕರು ಮತ್ತು ಅಲ್ಲಿನ ಸಾರ್ವಜನಿಕರು ಪ್ರಮುಖ ಪಾತ್ರ ವಹಿಸಿದರು. ಈ ವಿಜಯವು ಹಿಂದು ಸಂಘಟನೆಯ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಫಲ ಎಂದು ಸ್ಥಳೀಯರು ಹೇಳಿದ್ದಾರೆ.