ಬಂಟ್ವಾಳ ಜಟಕಾ ಕೋಳಿ ಮಾಂಸ ಅಂಗಡಿ ತೆರುವಿನ ಕುರಿತು ನಡೆದ ಸಾಮಾನ್ಯ ಸಭೆಯಲ್ಲಿನ ನಿರ್ಣಯ ಹೇಗಿತ್ತು ನೋಡಿ!!

  • 01 Dec 2024 03:43:46 PM


ವಿಟ್ಲ: ವಿಟ್ಲ ಸಮೀಪ ಮಂಗಳಪದವು ಎಂಬಲ್ಲಿ *ಹಿಂದೂ ಜಟ್ಕಾ ಮಾಂಸ* ಕೋಳಿ ಅಂಗಡಿಯನ್ನು ತೆರವು ಮಾಡಬೇಕೆಂದು ಬಂಟ್ವಾಳ ತಾಲೂಕಿನ EO ವೀರಕಂಬ ಪಂಚಾಯತ್ ಮೂಲಕ ಜಟ್ಕಾ ಮಾಂಸ ಅಂಗಡಿಯ ಮಾಲಕ ಧನಂಜಯ್ ಪಾದೆ ಅವರಿಗೆ ನೋಟೀಸು ಜಾರಿ ಮಾಡಿರುವ ಘಟನೆಯೊಂದು ಇತ್ತೀಚೆಗೆ ನಡೆದಿತ್ತು ...

ವಿಧಾನ ಪರಿಷತ್ ಚುನಾವಣೆಯ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಸದ್ಯಸರಿಂದ ಬಂದ ನಿರ್ಣಯ ಹೀಗಿತ್ತು!!!! 

*ಬಂಟ್ವಾಳ ತಾಲೂಕಿನ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಅನಧಿಕೃತ ಅಂಗಡಿಗಳು ಇದ್ದೇ ಇರುತ್ತದೆ. ಈ ಎಲ್ಲಾ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿಸಿದಲ್ಲಿ ಮಾತ್ರ ವೀರಕಂಬ ಪಂಚಾಯತ್ ವ್ಯಾಪ್ತಿಯ ಅಂಗಡಿಗಳನ್ನು ತೆರವು ಮಾಡಿಸಲು ಸಾಧ್ಯ* ಎಂಬ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿತ್ತು.

ಇದು ನ್ಯಾಯಯುತ ನಿರ್ಣಯವೆಂದು ಹಿಂದೂ ಸಮಾಜ ಮತ್ತು ಹೋರಾಟ ಸಮಿತಿ ಇದನ್ನು ಸ್ವಾಗತಿಸುತಿದ್ದೆ ಎಂದು ಹೇಳಿದರು.