ದ.ಕ, ಕೆಯ್ಯೂರು: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದು ವರ್ಷಗಳೇ ಉರುಳಿ ಹೋಗಿದೆ ಆದರೆ ಪ್ರಕರಣದ ಪ್ರಮುಖ ಆರೋಪಿ ಅಬೂಬಕ್ಕರ್ ಸಿದ್ದಿಕ್ ಇನ್ನೂ ಕೂಡ ಪತ್ತೆಯಾಗಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆ ಹಾಗೂ ಗೊಂದಲಗಳು ಸಾರ್ವಜನಿಕ ವಲಯದಲ್ಲಿದೆ. ಸದ್ಯ, ಆರೋಪಿ ಅಬೂಬಕ್ಕರ್ ಸಿದ್ದಿಕ್ ಪತ್ನಿ ಮನೆಗೆ ಇಂದು ರಾಷ್ಟ್ರೀಯ ತನಿಖಾ ದಳ ಏಕಾಏಕಿ ದಾಳಿ ನಡೆಸಿದೆ.
ಬೆಳ್ಳಂಬೆಳಗ್ಗೆ ಎನ್ಐಎ ದಾಳಿ!
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಕೆಲವು ಆರೋಪಿಗಳು ಈಗಾಗಲೇ ಬಂಧಿಸಲ್ಪಟ್ಟಿದ್ದಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಅಬೂಬಕ್ಕರ್ ಸಿದ್ದಿಕ್ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದಾನೆ. ಇದೀಗ ಇಂದು ಬೆಳ್ಳಂಬೆಳಗ್ಗೆ ಕೆಯ್ಯೂರಿನಲ್ಲಿರುವ ಅಬೂಬಕ್ಕರ್ ಸಿದ್ದಿಕ್ ಪತ್ನಿ ಮನೆಗೆ ಎನ್ಐಎ ದಾಳಿ ಮಾಡಿ ತನಿಖೆ ನಡೆಸಿದೆ ಎನ್ನಲಾಗಿದೆ.
ಸರ್ಚ್ ವಾರೆಂಟ್ ನೊಂದಿಗೆ ದಾಳಿ!
ಇಂದು ಮುಂಜಾನೆ ಎನ್ಐಎ ಸರ್ಚ್ ವಾರೆಂಟ್ ನೊಂದಿಗೆ ಆರೋಪಿ ಅಬೂಬಕ್ಕರ್ ಸಿದ್ದೀಕ್ ಪತ್ನಿ ಮನೆಗೆ ದಾಳಿ ನಡೆಸಿ ತನಿಖೆ ಮಾಡಿದೆ. ಪ್ರವೀಣ್ ನೆಟ್ಟಾರು ಕೊಲೆ ಸಮಯದಲ್ಲಿ ಸ್ಥಳದಲ್ಲೇ ನಿಂತು ಅಬೂಬಕ್ಕರ್ ಸಿದ್ದೀಕ್ ಆರೋಪಿಗಳಿಗೆ ಸಹಕರಿಸಿದ್ದ ಎನ್ನುವ ಆರೋಪದ ಮೇಲೆ ಆತನ ಮೇಲೆ ಕೇಸ್ ದಾಖಲಾಗಿದೆ.