ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಆರು ಕಾರ್ಮಿಕರ ಮತ್ತು ಒಬ್ಬ ಡಾಕ್ಟರ್ ನ ಹತ್ಯೆ ಗೃಹಮಂತ್ರಿ ಅಮಿತ್ ಶಾ ಗರಂ ಘಟನೆಯ ತೀವ್ರಖಂಡನೆ ಆಪರೇಷನ್ ಕ್ಲೀನ್ ಕಾಶ್ಮೀರ್ ನಡೆಯಲಿದೆಯೇ???

  • 22 Oct 2024 07:00:24 PM

ಕಾಶ್ಮೀರ : ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಕಾಶ್ಮೀರದಲ್ಲಿ ಲಡಾಕ್ ಭಾಗದಲ್ಲಿ ಚೀನಾ ಹಾಗೂ ಪಾಕಿಸ್ತಾನದ ಗಡಿಭಾಗದಲ್ಲಿ ಸೈನಿಕ ಕಾರ್ಯಕ್ಕೆ ಬೇಕಾಗಿ ಟನಲ್ ನಿರ್ಮಾಣ ಮಾಡುತ್ತಿರುವ ಏಳು ಕಾರ್ಮಿಕರನ್ನು ಶೂಟ್ ಮಾಡಿದ ಭಯೋತ್ಪಾದಕರು.......

 

ಮೃತ ಪಟ್ಟಿರುವವರ ಪೈಕಿಯಲ್ಲಿ ಆರು ಜನ ಕಾರ್ಮಿಕರು ಹಾಗೂ ಒಬ್ಬರು ಡಾಕ್ಟರ್ ಆಗಿರುತ್ತಾರೆ. ಹೊರರಾಜ್ಯದಿಂದ ಆರ್ಟಿಕಲ್ 370 ಬ್ಯಾನ್ ಆದ ನಂತರ ಕೆಲಸಕ್ಕೆ ಬಂದಿರುವ ಕಾರ್ಮಿಕರನ್ನು ಟಾರ್ಗೆಟ್ ಮಾಡುವುದು ಒಂದು ದೊಡ್ಡ ಹುನ್ನಾರದ ಭಾಗವೇ? ?ಕಾಶ್ಮೀರಕ್ಕೆ ಯಾರು ಕಾಲಿಡಬಹುದು ಎಂದು ಭಯಾನಕ ವಾತಾವರಣ ಸೃಷ್ಟಿ ಮಾಡಿದೆಯೇ????

 

ಮೃತ ಪಟ್ಟ ಕಾರ್ಮಿಕರು ಹಾಗೂ ಡಾಕ್ಟರ್ ಊಟ ಮಾಡುವ ಸಂದರ್ಭದಲ್ಲಿ ಇಬ್ಬರು ಭಯೋತ್ಪಾದಕರು ಗನ್ ಹಿಡಿದುಕೊಂಡು ಬಂದು ಶೂಟ್ ಮಾಡಿದರು ಎಂದು ತಿಳಿದುಬಂದಿದೆ. 

 

ಘಟನೆಯನ್ನು ಗ್ರಹ ಮಂತ್ರಿ ಅಮಿತ್ ಶಾ ಅವರು ತೀವ್ರವಾಗಿ ಖಂಡಿಸಿರುತ್ತಾರೆ ಕಾಶ್ಮೀರ್ ಆಪರೇಷನ್ ಅನ್ನು ಪ್ರಾರಂಭ ಮಾಡಬೇಕೆಂದು ಜನರ ಕೂಗು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಶಿಸಬೇಕು ಎಂದು ಸಾಮಾನ್ಯ ಜನರು. ....