ಬೆಂಗಳೂರು: ನಿಧಿ ಆಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಸ್ವಂತ ಮಗುವನ್ನೇ ಬಲಿ ಕೊಡಲು ಮುಂದಾದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮಗುವನ್ನ ಬಲಿ ಕೊಡಲು ಮುಂದಾದ ವ್ಯಕ್ತಿಯನ್ನು ಸದ್ದಾಂ ಎಂದು ಗುರುತಿಸಲಾಗಿದೆ.
ಹಿಂದೂ ಹೆಸರಿಟ್ಟಯಕೊಂಡು ವಂಚನೆಯಿಂದ ಹಿಂದೂ ಯುವತಿಯನ್ನು ವರಿಸಿದ ಈತ ನಿಧಿಯ ಆಸೆಗೆ ಬಿದ್ದು ಮಾಡಿದ ಕೆಲಸ ಕೇಳಿದ್ರೆ ನೀವು ಕ್ಯಾಕರಿಸಿ ಉಗಿಯೋದು ಗ್ಯಾರಂಟಿ.
ಸೈಕೋ ಸದ್ದಾಂ ಲವ್ ಜಿಹಾದ್!
ತನ್ನನ್ನು ಆದಿಈಶ್ವರ್ ಎಂದು ಪರಿಚಯಿಸಿಕೊಂಡು ಹಿಂದೂ ಯುವತಿಗೆ ಪ್ರೀತಿಯ ಬಲೆ ಬೀಸಿದ್ದ ಸದ್ದಾಂ ಆಕೆಯನ್ನು ಮದುವೆಯಾಗಿ ಗರ್ಭಿಣಿಯಾಗಿಸಿದ ಬಳಿಕ ಸೈಕೋ ರೀತಿ ವರ್ತಿಸಿದ್ದಾನೆ.
ನಿಧಿ ಹುಡುಕುವ ಹುಚ್ಚು ಬೆಳೆಸಿಕೊಂಡಿದ್ದ ಈತ ಅದಕ್ಕಾಗಿ ಎಲ್ಲೆಂದರಲ್ಲಿ ಸುತ್ತುತ್ತಿದ್ದಾ. ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂಬುದನ್ನರಿತ ಈ ಸೈಕೊ ಕೊನೆಗೆ ತನ್ನ ಮಗುವನ್ನೇ ಬಲಿ ಕೊಡಲು ಮುಂದಾಗಿದ್ದಾನೆ.
ಪತ್ನಿ ನೀಡಿದ ಕೇಸ್, ಸೈಕೋ ಅಂದರ್!
ನಮ್ಮ ಮಗುವನ್ನು ಬಲಿ ಕೊಡೋಣ ಅದರಿಂದ ನಮಗೆ ನಿಧಿ ಸಿಗುತ್ತದೆ ಮತ್ತು ಬೇಕಾದಷ್ಟು ಸಂಪತ್ತು ಕೂಡ ಸಿಗುತ್ತದೆ. ನಿಧಿ ಸಿಕ್ಕಿದ ಬಳಿಕ ನಾವು ಶ್ರೀಮಂತರಾಗುತ್ತೇವೆ ಎಂದೆಲ್ಲ ಹೇಳಿಕೊಂಡು ಈ ಸೈಕೋ ಸದ್ದಾಂ ಪ್ರತೀ ದಿನ ಪತ್ನಿಗೆ ಕಿರುಕುಳ ನೀಡುತ್ತಿದ್ದ.
ಜೊತೆಗೆ ಮಗುವಾದ ಬಳಿಕವೇ ಯುವತಿಗೆ ತಾನು ಲವ್ ಜಿಹಾದಗ ಗೆ ಬಲಿಯಾಗಿರುವುದು ತಿಳಿದು ಬಂದಿದೆ. ಇದೆಲ್ಲದರಿಂದ ಬೇಸತ್ತ ಯುವತಿ ಪೊಲೀಸರಿಗೆ ದೂರು ನೀಡಿ ತವರು ಮನೆ ಸೇರಿದ್ದಾಳೆ. ಸದ್ಯ, ನಿಧಿಗಾಗಿ ಮಗುವನ್ನೇ ಬಲಿ ಕೊಡಲು ಮುಂದಾದ ಸೈಕೋ ಸದ್ದಾಂ ಕಂಬಿ ಎಣಿಸುತ್ತುದ್ದಾನೆ.