ಇವ್ಳು ಹೆಣ್ಣಾ...ಹೆಮ್ಮಾರೀನಾ...? ಆಸ್ತಿಗಾಗಿ ಲವ್ವರ್ ಜೊತೆ ಸೇರಿ ಗಂಡನನ್ನೇ ಕೊಂದ ಪಾಪಿ ಪತ್ನಿ..!

  • 17 Dec 2024 05:42:31 PM

ಕೊಡಗು, ಸುಂಠಿ ಕೊಪ್ಪ: ಇವತ್ತು ಸಮಾಜದಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹಣ, ಚಿನ್ನ, ಆಸ್ತಿ, ಕಾಮದ ಎದುರು ಎಲ್ಲಾ ಸಂಬಂಧದ ಮೌಲ್ಯನೂ ಶೂನ್ಯವಾಗಿ ಬಿಟ್ಟಿದೆ.

 

ಯಾವುದೋ ಸ್ವಾರ್ಥಕ್ಕಾಗಿ ತಮ್ಮವರ ಜೀವವನ್ನೇ ಬಲಿ ಕೊಡುವ ಕ್ರೂರಿಗಳು ಈಗೀಗ ಮಾನವೀಯತೆಯನ್ನೂ ಮರೆತು ಬದುಕುತ್ತಿದ್ದಾರೆ. ಅಂತಹುದೇ ಅಮಾನವೀಯ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. 

 

ಸುಟ್ಟ ಸ್ಥಿತಿಯಲ್ಲಿದ್ದ ವ್ಯಕ್ತಿಯ ಮೃತದೇಹ ಪತ್ತೆಗೆ ಸಿಕ್ಕಿತು ತಿರುವು..!!

 

ಅಕ್ಟೋಬರ್ 8ರಂದು ಕೊಡಗಿನ ಸುಂಟಿಕೊಪ್ಪ ಸಮೀಪ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು.

 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗಿಳಿದಿದ್ದರು. ಇದೀಗ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

 

ಪ್ರಮುಖ ಆರೋಪಿ ನಿಹಾರಿಕ (29), ಪಶು ವೈದ್ಯ ನಿಖಿಲ್ ಹಾಗೂ ಹರಿಯಾಣದ ಅಂಕುರ್ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ.

 

ಈ ಮೂವರು ಸೇರಿ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54) ಎಂಬಾತನನ್ನು ತೆಲಂಗಾಣದಲ್ಲಿ ಕೊಲೆ ಮಾಡಿ, ಕೊಡಗಿನಲ್ಲಿ ಸುಟ್ಟು ಹಾಕಿ ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದರು.

 

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

 

ಪ್ರಕರಣ ಸಂಬಂಧ ಪೊಲೀಸರು ಸಿಸಿ ಕ್ಯಾಮೆರಾ ಸುಳಿವು ಆಧರಿಸಿ, ರೆಡ್ ಕಲರ್ ಬೆಂಜ್ ಕಾರಿನ ಹಿಂದೆ ಬಿದ್ದಿದ್ದರು. ಕಾರು ಪತ್ತೆ ಮಾಡಿ ಇದೀಗ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. 

 

ಖತರ್ನಾಕ್ ಕಿಲಾಡಿ ನಿಹಾರಿಕಾಗೆ ಗಂಡನಿಗಿಂತ ಆಸ್ತಿಯೇ ಮುಖ್ಯವಾಗಿತ್ತು...!!

 

ನಿಹಾರಿಕಾ ಅಂತಿಂಥ ಹುಡುಗಿಯೇನಲ್ಲ. ಬಲು ಖತರ್ನಾಕ್ ಲೇಡಿ ಆಗಿದ್ದ ಈಕೆ ಹತ್ತನೇ ತರಗತಿಯಲ್ಲಿರುವಾಗಲೇ ಮದುವೆಯಾಗಿದ್ದಳು.

 

ಎರಡು ಮಕ್ಕಳಾದ ಮೇಲೆ ಪತಿಗೆ ಡಿವೋರ್ಸ್ ಕೊಟ್ಟು ದೂರವಾಗಿದ್ದಳು. ಬಳಿಕ ಆಕೆಗೆ ಜೈಲಿನಲ್ಲಿದ್ದ ಅಂಕುರ್ ಎಂಬಾತನ ಪರಿಚಯವಾಗಿತ್ತು.

 

ಈ ಅಂಕುರ್‌ ಮೂಲಕ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್‌ನ ಪರಿಚಯವಾಗಿ ಮದುವೆಯಾಗಿದ್ದಳು. ರಮೇಶ್‌ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದರು.

 

ಆಕೆಗೆ ರಮೇಶ್ ಕೇವಲ ಗಂಡ ಮಾತ್ರ ಆಗಿದ್ದು ಅವನಿಂದ ಆಸ್ತಿ ದೋಚಿಕೊಳ್ಳೋದೇ ಅವಳ ಮೂಲ ಉದ್ದೇಶವಾಗಿತ್ತು. ಈ ನಡುವೆ ನಿಹಾರಿಕ ನಿಖಿಲ್‌ ಜತೆಗೂ ಕೂಡಾ ಲಿವಿಂಗ್ ರಿಲೇಶನ್ ಶಿಪ್‌ನಲ್ಲಿ ಇದ್ದಳು.

 

ಎಲ್ಲವನ್ನು ಅಲ್ಲಲ್ಲೇ ಮೈಂಟೆನಿಂಗ್ ಮಾಡಿಕೊಳ್ಳುತ್ತಾ ಬರುತ್ತಿದ್ದಳು. ನಿಹಾರಿಕ ಅಂಕುರ್‌ನೊಂದಿಗೆ ಸೇರಿ ಆಸ್ತಿ ನೀಡುವಂತೆ ರಮೇಶ್‌ನಿಗೆ ಕಿರುಕುಳ ನೀಡುತ್ತಿದ್ದಳು.

 

ಆಸ್ತಿ ನೀಡಲು ಆತ ಒಪ್ಪದಿದ್ದಾಗ ಹೈದರಾಬಾದ್ ಸಮೀಪ ಅವನನ್ನು ಕರೆತಂದು ಹಗ್ಗದಿಂದ ಬಿಗಿದು ರಮೇಶ್‌ನ ಕೊಲೆ ಮಾಡಿದ್ದರು. ಕೊಲೆ ಮಾಡಿ ಬಳಿಕ ರಮೇಶ್‌ನ ಕಾರಿನಲ್ಲೇ ಆತನ ಅಪಾರ್ಟ್ಮೆಂಟ್‌ಗೆ ಹೋಗಿ ಹಣ, ಆಸ್ತಿ ದಾಖಲೆ ದೋಚಿದ್ದರು.

 

ನಂತರ ಬೆಂಗಳೂರಿಗೆ ಬಂದು ಪೆಟ್ರೋಲ್ ಖರೀದಿಸಿ, ಕೊಡಗಿಗೆ ತಂದು ರಮೇಶ್‌ ದೇಹವನ್ನು ಸುಟ್ಟು ಹಾಕಿದ್ದರು.

 

ಈಕೆಯ ಖತರ್ನಾಕ್ ಮೈಂಡ್ ಗೇಮ್ ಗೆ ಪೊಲೀಸರೇ ದಂಗಾಗಿದ್ದಾರೆ. ಇದೀಹ ಆರೋಪಿಗಳು ಪೊಲೀಸರ ಬಲೆಯಲ್ಲಿ ಸಿಕ್ಕಿಬಿದ್ದಿದ್ದು ಕಂಬಿ ಎಣಿಸುತ್ತಿದ್ದಾರೆ.