ಪುತ್ತೂರು| ಶಾಲಾ ಶಿಕ್ಷಕರಿಂದ‌ ಕಿರುಕುಳ!;ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ!

  • 31 Dec 2024 11:55:46 AM

ಹಿಂದೂ ರಿಪಬ್ಲಿಕ್ :- ಶಾಲಾ ಶಿಕ್ಷಕರ ನಿರಂತರ ಕಿರುಕುಳದಿಂದ ಬೇಸತ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಹತ್ನಿಸಿದ ಘಟನೆ ಪುತ್ತೂರಿನಲ್ಲಿ‌ ನಡೆದಿದೆ.

 

ಗಂಭೀರವಾಗಿ ಅಸ್ವಸ್ಥತೆಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,

 

ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ!

 

ಮೂಲತಃ ಬೆಳ್ತಂಗಡಿ ನಿವಾಸಿಯಾಗಿರುವ ವಿದ್ಯಾರ್ಥಿನಿ ಪುತ್ತೂರಿನ ಸರ್ಕಾರಿ ಪ್ರೌಡ ಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

 

ಕಳೆದ ಸೋಮಾವಾರ ಈಕೆ ಶಾಲೆಗೆ ಹೊರಡುವ ವೇಳೆ ಏಕಾಏಕಿ ವಾಂತಿ ಮಾಡಿಕೊಂಡು ಅಸ್ವಸ್ಥತಗೊಂಡಿದ್ದಾಳೆ.

 

ಇದರಿಂದ ಬೆಚ್ಚಿ ಬಿದ್ದ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಅಸಲಿ ವಿಚಾರ ಬಯಲಾಗಿದೆ‌. 

 

ಕಿರುಕುಳ ನೀಡಿದ ಶಿಕ್ಷಕಿ!

 

ಯಥೇಚ್ಛವಾಗಿ ನೋವಿನ ಮಾತ್ರೆಗಳನ್ನು ನುಂಗಿ ಅಸ್ವಸ್ಥತಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿ ವಿಚಾರಿಸಿದಾಗ, 'ಶಾಲೆಯಲ್ಲಿ ಶಿಕ್ಷಕರು 100% ಫಲಿತಾಂಶಕ್ಕಾಗಿ ದಿನಾ ಬಯ್ಯುತ್ತಾರೆ.

 

ಇದರಿಂದ ಬೇಸತ್ತ ನಾನು ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದೆ. ಇದರಿಂದ ಕೋಪಗೊಂಡ ಶಿಕ್ಷಕರು ಪ್ರತೀ ದಿನ ಕಿರುಕುಳ ನೀಡುತ್ತಿದ್ದರು' ಎಂದು ತನ್ನ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿಸಿದ್ದಾಳೆ.

 

ಬಾಲಕಿಯ ತಂದೆಯೂ‌ ಕೂಡ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಪೊಲೀಸರು ಘಟನೆಯ ವಿವರ ಪಡೆದುಕೊಂಡಿದ್ದಾರೆ.