ಪೆರ್ಲ :ಕಲಿಯುಗದ ಕಲ್ಪತರು ಎಂದೇ ವಿಶೇಷಣಗಳಿಂದ ಉಲ್ಲೇಖಿಸಲ್ಪಡುವ ಸರ್ವಾಭಿಷ್ಟ ಸಿದ್ಧಿಪ್ರದವಾದ ಶಿವಾರಾಧನೆಯ ಮಹತ್ವ ಸಾರುವ ಶ್ರೀವರದ ಶಂಕರ ವ್ರತ ಪೂಜೆಯನ್ನು ಒಕ್ಟೋಬರ್ 31ರಂದು ಅಪರಾಹ್ನ ಗಂಟೆ 3.00 ರಿಂದ ಮೊಗೇರು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರ ಮೊಗೇರಿ ನಲ್ಲಿ ಆಯೋಜಿಸಲಾಗಿದೆ.
*ಆರ್.ಎಸ್.ಬಿ.ಯುವ ಸಂಘ* ಮೊಗೇರು ಇದರ ವತಿಯಿಂದ ನಡೆಯುವ ಈ ಕಾರ್ಯಕ್ರಮವು, ಶ್ರೀ ದೇವಳದ ಆಡಳಿತ ಸಮಿತಿ ಯ ಪೂರ್ಣ ಸಹಕಾರದೊಂದಿಗೆ ವೇದಮೂರ್ತಿ ಬಾಲಕೃಷ್ಣ ಭಟ್ ಪಾಲೆಚ್ಚಾರ್ ಅವರ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ವರದ ಶಂಕರ ವ್ರತ ಹಾಗೂ ಶ್ರೀ ದೇವಿಗೆ ವಿಶೇಷ ರಂಗಪೂಜೆ ದೀಪಾಲಂಕಾರ ಸೇವೆ ಜರಗಲಿದೆ. ಇದರ ಅಂಗವಾಗಿ ಅಂದು ಬೆಳಗ್ಗೆ 8 ಗಂಟೆಗೆ ಕ್ಷೇತ್ರದಲ್ಲಿ ಗಣಪತಿ ಹವನ, ಮಧ್ಯಾಹ್ನ 3 ಗಂಟೆಗೆ ಶ್ರೀ ವರದ ಶಂಕರ ವ್ರತ ಪೂಜಾರಂಭ, ಸಂಜೆ 4.30ಕ್ಕೆ ಶ್ರೀಸಚ್ಚಿದಾನಂದ ಭಟ್ ಮೊಗೇರು ಅವರಿಂದ ಕಥಾ ನಿರೂಪಣೆ ರಾತ್ರಿ 6 ಗಂಟೆಗೆ ಮಂಗಳಾರತಿ ಪ್ರಸಾದ ವಿತರಣೆ ರಾತ್ರಿ ಗಂಟೆ 7ರಿಂದ ವಿಶೇಷ ದೀಪಾಲಂಕರ ಶ್ರೀದೇವಿಗೆ ರಂಗಪೂಜೆ,ಪ್ರಸಾದ ಭೋಜನ ವಿತರಣೆ ಜರಗಲಿದೆ.