ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನಿಂದ ಏಲಂ ಗೆ ನಿಗದಿಯಾಗಿದ್ದ ಗಾಳಿಮುಖ ಬಸ್ ಸ್ಟಾಂಡ್ ನ‌ ಮುಂಭಾಗದಲ್ಲಿದ್ದ ಕಟ್ಟಡ ದ ಏಲಂ ಸ್ಥಗಿತ

  • 29 Jan 2025 07:15:49 PM

ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮ ವ್ಯಾಪ್ತಿಯ ಗಾಳಿಮುಖ ಎಂಬಲ್ಲಿ ನಿರ್ಮಿಸಲಾದ ಪಂಚಾಯತ್ ವತಿಯಿಂದ ಅಂಗಡಿ ಕಟ್ಟಡ ಏಲಂ ಪ್ರಕಟಣೆಯಲ್ಲಿ ದಿನಾಂಕ : 30-01-2025 ರಂದು ನಡೆಸುವುದಾಗಿ ತೀರ್ಮಾನಿಸಲಾಗಿತ್ತು.

ಆದರೆ ಸದ್ರಿ ಕಟ್ಟಡದ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಶೀಟುಗಳು ಮತ್ತು ಇಂಟರ್‌ಲಾಕ್ ಕಳವಾದ ಕಾರಣ ಪ್ರಕರಣ ಸಂಪ್ಯ ಠಾಣೆಯಲ್ಲಿ ದೂರು ದಾಖಲಾಗಿರುವುದರಿಂದ ಪ್ರಕರಣ ಇತ್ಯರ್ಥಗೊಂಡು ನಂತರ ಏಲಂ ಮಾಡಲಾಗುವುದು.

ಉಳಿದ ಏಲಂ ಪ್ರಕ್ರಿಯೆ ದಿನಾಂಕ: 30-01-2025 ರಂದು ನಡೆಸಲಾಗುವುದು.

ಎಂದು ಗ್ರಾಮ ಪಂಚಾಯತ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ