ವಕ್ಫ್ ಬೋರ್ಡ್ ಮೂಲಕ ಹಿಂದೂ ರೈತರ ಭೂಮಿ ದೋಚಲು ಸಂಚು:ಕಾಂಗ್ರೆಸ್ ಇಸ್ಲಾಮಿಕ್ ರಾಷ್ಟ್ರದ ಕನಸು ಬಿತ್ತುತ್ತಿದೆ ಎಂದು ರಘು ಸಕಲೇಶಪುರ ತೀವ್ರ ಆಕ್ರೋಶ

  • 01 Nov 2024 12:59:24 PM


ಸಕಲೇಶಪುರ: ವಕ್ಫ್ ಬೋರ್ಡ್, ಹಿಂದೂಗಳ ಜೀವನದ ಮೇಲೆ ಪ್ರಭಾವ ಬೀರಲು ಕಾಂಗ್ರೆಸ್ ಬಳಸುತ್ತಿರುವ ಅಸ್ತ್ರ ಎಂಬ ಆರೋಪ ಕೇಳಿ ಬಂದಿದೆ. ಮೊಘಲರು ಈ ದೇಶವನ್ನು ಲೂಟಿ ಮಾಡಿದಂತೆ, ಇಂದು ವಕ್ಫ್ ಬೋರ್ಡ್ ಭಾರತವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿದೆ ಎಂದು ಕೂಡ ಹೇಳಲಾಗುತ್ತಿದೆ. ಸರ್ಕಾರಿ ಜಾಗ, ಸ್ಮಶಾನ, ದೇವಸ್ಥಾನ ಮತ್ತು ಮಠ ಮಂದಿರಗಳನ್ನು ವಕ್ಫ್ ಆಸ್ತಿಯಂತೆ ಘೋಷಿಸಿ, ವಕ್ಫ್ ಟ್ರಿಬ್ಯೂನಲ್ ಕೋರ್ಟ್ ಮೂಲಕ ನೋಟೀಸು ನೀಡುತ್ತಿರುವುದು ಆತಂಕಕಾರಿಯಾಗಿ ಕಾಣಿಸಿಕೊಂಡಿದ್ದು, ಇದರ ವಿರುದ್ಧ ದೊಡ್ಡ ಮಟ್ಟದ ಜನಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.

 

ಗುಜರಾತ್'ನ ಕೋರ್ಟ್ ಜಾಗ ವಕ್ಫ್ ಗೆ ಸೇರಿದ್ದು ಎಂಬ ವಾದ ,ಗೊಂದಲಗಳ ಗಲಭೆ ಮಾಸುವ ಮುನ್ನವೇ ವಿಜಾಪುರದ 10 ಸಾವಿರ ಎಕ್ಕರೆ ಜಮೀನು ವಕ್ಫ್ ಗೆ ಸೇರಿದ್ದು ಎಂದು ಬಡ ರೈತರಿಗೆ ನೋಟೀಸ್ ನೀಡಿ ಇನ್ನೊಂದು ಆಸ್ತಿ ಕಬಳಿಕೆಯ ಪ್ರಯತ್ನವನ್ನುಮಾಡುತಿದ್ದಾರೆ. ರೈತರ ಪಹಣಿ ಕಾಲಂನಲ್ಲಿ ವಕ್ಫ್ ಅಸ್ಥಿ ಎಂದು ನಮೂದಾಗಿರೋದು ಬಡ ಹಿಂದೂ ರೈತರ ಜೀವನಕ್ಕೆ ಬೆಂಕಿ ಇಟ್ಟಂತಾಗಿದೆ.

 

ವಕ್ಫ್ ಹೆಸರಿನಲ್ಲಿ ಬಡ ರೈತರ ಮೇಲೆ ದೌರ್ಜನ್ಯ ಮಾಡಿ ನೂರಾರು ವರ್ಷದಿಂದ ಒಕ್ಕಲತನ ಮಾಡುತಿದ್ದ ರೈತರ ಜಮೀನು ವಕ್ಫ್ ಗೆ ಸೇರಿದ್ದು ಎಂದು ನೋಟೀಸ್ ನೀಡಿ ಹೋರಾಟದ ಹಾದಿ ಹಿಡಿಯುವ ಹಾಗೆ ಮಾಡಿದ್ದೂ ಜಮೀರ್ ಅಹ್ಮದ್. ಇವರು ಕರ್ನಾಟಕ ರಾಜ್ಯದ ವಕ್ಫ್ ಮಂತ್ರಿ ಆಗಿರೋದೆ ನಮ್ಮೆಲ್ಲರ ದುರಂತಕ್ಕೆ ಕಾರಣವಾದದ್ದು.

 

ಜಮೀರ್ ಅಹ್ಮದ್ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ದ್ವೇಷ ಭಾವನೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಪ್ರಮಾಣ ಮಾಡಿ ಇಂದು ವಕ್ಫ್ ಜಮೀನಿಗೆ ಹಸಿರು ಬಣ್ಣ ಹಚ್ಚಿ ಅಲ್ಲಾಹನಿಗೆ ಲೆಕ್ಕ ಕೊಡಬೇಕೆಂದು ಭಾಷಣ ಮಾಡಿರೋದು ಸಂವಿಂಧಾನಕ್ಕೆ ಮತ್ತು ಹಿಂದೂ ಸಮಾಜಕ್ಕೆ ವಿರೋದಿಸಿದ್ದಂತಾಗಿದೆ.

 

ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಲ್ಲಿ ಈ ಮೂಲಕ ಮನವಿ ಮಾಡುವುದೇನಂದರೆ *ತಕ್ಷಣ ಜಮೀರ್ ಅಹ್ಮದ್ ಅವರನ್ನು ಸಂಪುಟದಿಂದ ತೆಗೆದುಬಿಡಿ, ಕರ್ನಾಟಕದ ರೈತರು ಶಾಂತಿಯುತವಾಗಿ ಬದುಕಲು ಸಾಧ್ಯವಾಗುತ್ತದೆ*. ಇಲ್ಲವಾದರೆ, *ಇದರ ವಿರುದ್ಧ ರಾಜ್ಯದ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಿ, ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು* ಎಂದು ಹಿಂದೂ ಮುಖಂಡ ರಘು ಸಕಲೇಶಪುರ ಎಚ್ಚರಿಕೆ ನೀಡಿದ್ದಾರೆ.