ಯುವಕೇಸರಿ ಗಡಿಯಾರ ಸಂಘಟನೆಯಿಂದ ಮನೆ ಬೆಳಗೋಣ ವಿಶೇಷ ಕಾರ್ಯಕ್ರಮ

  • 01 Nov 2024 10:56:52 PM


ದೇಂತಡ್ಜ ಶ್ರೀವನದುರ್ಗಾ ಅಮ್ಮನವರ ಸನ್ನಿಧಿಯಲ್ಲಿ,ದೈವ ದೇವರ  ಕೃಪೆಯಿಂದ ಪ್ರಾರಂಭವಾದ ನಮ್ಮ ಹೆಮ್ಮೆಯ ಸಂಘಟನೆ , ಯುವಕೇಸರಿ ಗಡಿಯಾರ,
ಬನ್ನಿ ವಿಕೃತಿಯಿಂದ ಸಂಸ್ಕೃತಿಯೆಡೆಗೆ ಎಂಬ ಘೋಷವಾಕ್ಯ ದೋಂದಿಗೆ,ಸನಾತನ ಸಂಸ್ಕೃತಿಯನ್ನು ನಾಶಮಾಡಲು ಬಂದ ಪಾಶ್ಚಾತ್ಯ ವಿಕೃತಿಯ ಅಂದಾನುಕರಣೆಯನ್ನು ಸನಾತನ ಧರ್ಮದಿಂದ ದೂರಗೊಳಿಸುವಲ್ಲಿ ನಮ್ಮ ಈ ಸಂಘಟನೆ ದುಡಿಯುತ್ತಿದೆ.


ಅಲ್ಲದೆ ಅಖಂಡ ಭಜನಾ ಸಪ್ತಾಹ,ಏಕಾಹ ಭಜನೆಯನ್ನೂ ನಡೆಸುತ್ತಾ ಬಂದಿದೆ.ಅಲ್ಲದೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಹಲವಾರು ಶ್ರಮಧಾನ,ಅಶಕ್ತರಿಗೆ ನೆರವು ಮುಂತಾದ ಸಮಾಜ ಕಾರ್ಯದಲ್ಲಿ ಮುಂದಾಗಿದೆ.


 ಮನೆ ಬೆಳಗೋಣ ನೂತನ ಕಾರ್ಯಕ್ರಮ 2024 ದೀಪಾವಳಿಯ ಪ್ರಯುಕ್ತ ಮನೆ ಬೆಳಗೋಣ ಎಂಬ ವಿಶಿಷ್ಟ ಕಾರ್ಯವನ್ನು ಆಯೋಜಿಸಲಾಗಿತ್ತು.
ಕೆದಿಲ ಗ್ರಾಮದ ಗಡಿಯಾರದಲ್ಲಿ ವಾಸವಾಗಿರುವ
ಶ್ರೀ ರಾಮ ಮೂಲ್ಯ
ಮಾತು ಬಾರದೆ,ಕಿವಿ ಕೇಳದೆ ಇರುವ ವ್ಯಕ್ತಿ
ಇವರು ದಂಪತಿಗಳಿಬ್ಬರೇ ಮನೆಯಲ್ಲಿ ವಾಸವಾಗಿದ್ದಾರೆ.
ಇವರ ಮನೆಗೆ ವಿಧ್ಯುತ್ ಸಂಪರ್ಕವಿದ್ದರೂ ಕಳೆದ ಎರಡು ವರುಷಗಳಿಂದ ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದರು.ಹಾಗು ಮನೆಯ ಮುಖ್ಯ ಬಾಗಿಲು ಮುರಿದು ಹೋಗಿತ್ತು.ಇದನ್ನು ಗಮನಿಸಿದ ಯುವಕೇಸರಿ ಗಡಿಯಾರ ,ಇವರ ಮನೆಗೆ ಹೊಸತಾದ ಮುಖ್ಯ ಬಾಗಿಲು ಹಾಗು ಬಾಕಿ ಇದ್ದ ವಿಧ್ಯುತ್ ಬಿಲ್ ಪಾವತಿಸಿ,ವಯರಿಂಗ್ ಸರಿ ಪಡಿಸಿ ಎರಡು ವರುಷದಿಂದ ಕತ್ತಲಿನಲ್ಲಿದ್ದ ಮನೆ ಮತ್ತೆ ಬೆಳಗುವಂತೆ ಮಾಡಲಾಯ್ತು.

 

 

ಯುವಕೇಸರಿ ಗಡಿಯಾರದ
ಕಾರ್ಯಕರ್ತರೆಲ್ಲಾ ರಾಮ ಮೂಲ್ಯ ಅವರ ಮನೆಯಲ್ಲಿ ಸೇರಿ ಭಾರತ ಮಾತಾ ಪೂಜನ ಹಾಗು ದೀಪಾವಳಿ ಹಬ್ಬ ವನ್ನು ಆಚರಿಸಿ ಮನೆಯವರೊಂದಿಗೆ ಸಂಭ್ರಮಸಲಾಯ್ತು.