ವಿಟ್ಲ : ವಿಟ್ಲ ಸಮೀಪದ ಚಂದಳಿಕೆಯಲ್ಲಿ ಬೈಕ್ ಅಪಘಾತದಿಂದ ಸವಾರನಿಗೆ ತೀವ್ರ ಗಾಯಗಳಾದ ಘಟನೆ ನಡೆದಿದೆ. ಮಹಿಳೆಯೊಬ್ಬರು ದಾರಿಯ ಮಧ್ಯೆ ಅಡ್ಡ ಬಂದ ಪರಿಣಾಮವಾಗಿ , ಬೈಕ್ ಅಪಘಾತಕ್ಕೀಡಾಯಿತೆಂದೂ, ಅಪಘಾತದಲ್ಲಿ ಗಂಭೀರ ಗಾಯಗೊಂಡ ಸವಾರನು ಇಡಿದು ಗ್ರಾಮದ ಬೂತಡ್ಕ ನಿವಾಸಿ ನಾಗೇಶ್ ಎಂದು ಗುರುತಿಸಲಾಗಿದೆ.
ಮಹಿಳೆ ಅಪಾಯದಿಂದ ಪಾರಾಗಿದ್ದಾರೆ, ಗಂಭೀರ ಗಾಯಗೊಂಡ ನಾಗೇಶ್ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಅವಘಡದಲ್ಲಿ ಗಾಯಗೊಂಡು ನರಳುತ್ತಿರುವ ಸವಾರನ್ನನು ಅಲ್ಲಿದ್ದ 2 ಹಿಂದೂ ಯುವಕರು ಲೀಲೇಶ್ ಮಾಡತಡ್ಕ ಮತ್ತು ಪ್ರಶಾಂತ್ ಮಾಡತಡ್ಕ ,ತಕ್ಷಣ ರಿಕ್ಷಾ ಹಿಡಿದು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಯನ್ನು ಮಾಡಿದರು.
ಯಾವುದೇ ಅನಾಹುತ, ಅವಘಡದಲ್ಲಿ ಯಾರೇ ಸಿಲುಕಿಕೊಂಡಿದ್ದರೂ ಕೂಡ ತಕ್ಷಣ ಇಂತಹ ತುರ್ತು ಸಹಾಯವನ್ನು ಮಾಡಬೇಕೆಂದು ಇದು ಒಂದು ಜೀವವನ್ನು ಉಳಿಸುವ ಪುಣ್ಯ ಕಾರ್ಯವಾಗಿರುತ್ತದೆ ಎಂದು ಹಿಂದೂ ಕಾರ್ಯಕರ್ತರು ವಿನಂತಿಸಿಕೊಂಡಿದ್ದಾರೆ.
ಇಂತಹ ತುರ್ತು ಸಹಾಯ ಮಾಡಿದ್ದಲ್ಲಿ 2000ರೂ ಪೊಲೀಸ್ ಠಾಣೆಯಿಂದ ಧನ ಸಹಾಯವನ್ನು ನೀಡುತ್ತಾರೆಂದು ಅದಕ್ಕಾಗಿ ಅಲ್ಲ ನಮ್ಮ ಮಾನವೀಯತೆಯ ಹಿತ ದೃಷ್ಟಿಯಿಂದ ಅಪಾಯದಲ್ಲಿರುವವರಿಗೆ ಸಹಾಯಹಸ್ತವನ್ನು ನೀಡಬೇಕೆಂದು ಹಿಂದೂ ಕಾರ್ಯಕರ್ತರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.