ವಿಟ್ಲ: ಕ್ಯಾನ್ಸರ್ ಪೀಡಿತರಿಗಾಗಿ ತಮ್ಮ ಬೆಳೆಸಿದ ಕೂದಲನ್ನು ದಾನವಾಗಿ ನೀಡಿರುವ ವಜ್ರೇಶ್ ವಿಟ್ಲ ಅವರ ಮಾನವೀಯ ನಡೆ ಸಮಾಜದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಇವರ ಈ ತ್ಯಾಗದ ಮಾದರಿ ನಡೆ ಹಲವರಿಗೆ ಪ್ರೇರಣೆಯಾಗಿದೆ. ಶರೀರದ ಭಾಗವೊಂದನ್ನು ಇತರರಿಗಾಗಿ ನೀಡುವುದು ಕೇವಲ ದಾನವಲ್ಲ, ಅದು ಹೃದಯದ ವಿಷಾಲತೆ ಮತ್ತು ಪರೋಪಕಾರದ ಪ್ರತಿರೂಪವಾಗಿದೆ.
ವಜ್ರೇಶ್ ಅವರ ಕೇಶದಾನದ ಬಳಿಕ, ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
ಇವರ . ಕೃತ್ಯ ಮತ್ತಷ್ಟು ಯುವಕರಿಗೆ ಪ್ರೇರಣೆಯಾಗಲಿ ಎಂಬದು ಎಲ್ಲರ ಹಾರೈಕೆ. ನಿಜವಾದ ತ್ಯಾಗವು ಮಾತ್ರವಲ್ಲದೆ, ಇತರರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಸಿಕೊಳ್ಳುವುದರ ಮೂಲಕ ಬೆಳೆದಾಗ ಮಾತ್ರ ನಿಜವಾದ ಬದಲಾವಣೆಗೆ ಸಾಧ್ಯವಾಗುತ್ತದೆ.