ಕಾಶ್ಮೀರದಲ್ಲಿ ಉಗ್ರರ ಧಾಳಿಗೆ ಹಿಂದೂ ಯುವಕನ ಹತ್ಯೆ ವಿರುದ್ಧ ತೀವ್ರ ಆಕ್ರೋಶ! ಹಿಂದೂಗಳ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿತ್ತಿದೆಯೇ?– ಡಾ. ಎಲ್.ಕೆ. ಸುವರ್ಣ

  • 23 Apr 2025 12:18:06 PM


ಜಮ್ಮು ಕಾಶ್ಮೀರ: ಕಾಶ್ಮೀರ ಪ್ರವಾಸದಲ್ಲಿದ್ದ ಶಿವಮೊಗ್ಗ ಮೂಲದ ಹಿಂದೂ ದಂಪತಿಗಳ ಮೇಲೆ ಉಗ್ರರಿಂದ ಭೀಕರ ಧಾಳಿ ಸಂಭವಿಸಿದೆ. 

 

ಈ ದಾಳಿಯಲ್ಲಿ ಪತಿ ಗುಂಡಿಕ್ಕಿ ಹತ್ಯೆಗೊಳಗಾಗಿದ್ದು, ಪತ್ನಿಗೆ "ನಿನ್ನನ್ನು ಬಿಡುತ್ತೇನೆ, ಮೋದಿಗೆ ಹೋಗಿ ಹೇಳು" ಎಂಬಂತೆ ಉಗ್ರರು ಸವಾಲು ಹಾಕಿದ್ದಾರೆ. ಈ ಕ್ರೂರ ಘಟನೆಯಿಂದ ದೇಶದ ಯಾವುದೇ ಕೋನದಲ್ಲಿಯೂ ಹಿಂದೂ ಸಮುದಾಯದವರು ಸುರಕ್ಷಿತವಾಗಿಲ್ಲವೆಯೆಂಬ ಭಾವನೆ ಮೂಡಿದೆ. 

 

ಈ ಹತ್ಯೆಯನ್ನು ಹಿಂದೂ ಮಹಾ ಸಭಾ ಕರ್ನಾಟಕ ಘಟಕ ತೀವ್ರವಾಗಿ ಖಂಡಿಸಿದೆ.

 

 ಯಾವ ಸರ್ಕಾರವಿದ್ದರೂ ಹಿಂದೂಗಳ ರಕ್ಷಣೆಯಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹಿಂದೂ ಮಹಾ ಸಭೆಯ ರಾಜ್ಯಾಧ್ಯಕ್ಷ ಡಾ. ಎಲ್.ಕೆ. ಸುವರ್ಣ ಅವರು ಕೇಂದ್ರ ಸರ್ಕಾರದ ವಿರುದ್ಧ ಆರೋಸಿದ್ದಾರೆ.

 

 ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಗೆ ವಿರೋಧವಾಗಿ ನಡೆದ ಹಿಂಸಾತ್ಮಕ ಘಟನೆಗಳನ್ನು ಉಲ್ಲೇಖಿಸಿ, ಹಿಂದೂಗಳ ಹತ್ಯೆ, ಆಸ್ತಿದರೋಡೆ, ಶೋಷಣೆ ನಡೆಯುತ್ತಿದ್ದು, ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಂಡಿಲ್ಲವೆಂದು ಅವರು ಆರೋಪಿಸಿದ್ದಾರೆ.

 

 "ಹಿಂದೂಗಳು ಭರವಸೆ ಇಟ್ಟ ಸರ್ಕಾರವೇ ಕೈ ಕಟ್ಟಿ ಕುಳಿತುಕೊಳ್ಳುತ್ತಿದೆಯೇ ಎಂಬ ಅನುಭವ ಜನರಲ್ಲಿ ಮೂಡುತ್ತಿದೆ," ಎಂದು ಅವರು ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ.

 

ಡಾ. ಸುವರ್ಣ ಅವರು ಕೇಂದ್ರ ಸರ್ಕಾರವನ್ನು ಈ ಘಟನೆಯ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೃತರ ಕುಟುಂಬಕ್ಕೆ ಎಲ್ಲಾ ನೆರವಿನ ವ್ಯವಸ್ಥೆಯ ಜೊತೆಗೆ, ಸೂಕ್ತ ಪರಿಹಾರ ನೀಡಬೇಕು ಮತ್ತು ಈ ಕ್ರೂರ ಕೃತ್ಯದ ವಿರುದ್ಧ 24 ಗಂಟೆಯೊಳಗೆ ಕನಿಷ್ಠ 10 ಉಗ್ರರನ್ನು ಹತ್ಯೆಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 

 "ಈ ಪಾಪಿಗಳ ವಿರುದ್ಧ ಕಾನೂನು ಕ್ರಮವಲ್ಲ, ಗುಂಡಿನ ಕ್ರಮವೇ ಬೇಕು," ಎಂದು ಅವರು ಕಿಡಿಕಾರಿದ್ದಾರೆ. ಅದಲ್ಲದೇ ಈ ಕಾರ್ಯ ನಡೆಯದಿದ್ದರೆ ಜನ ಸಾಮಾನ್ಯರು ಸರ್ಕಾರದ ಮೇಲೆ ಇಟ್ಟ ಭರವಸೆ ಕಳೆದುಕೊಳ್ಳುತ್ತಾರೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.