ಮಂಗಲ್ಪಾಡಿ: ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳಿಂದ ನಡೆದ ಹಿಂದೂ ನರಮೇಧವನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ ಮಂಗಲ್ಪಾಡಿ ಘಟಕದ ವತಿಯಿಂದ ಗುರುವಾರ, ಏಪ್ರಿಲ್ 24ರಂದು ಪ್ರತಿಭಟನಾ ಮೆರವಣಿಗೆ ಆಯೋಜಿಸಿದೆ.
ಈ ಮೆರವಣಿಗೆಯು ಕೈಕಂಬದಿಂದ ಸಂಜೆ 5.30ಕ್ಕೆ ಆರಂಭವಾಗಿ ಉಪ್ಪಳದ ವರೆಗೆ ಸಾಗಲಿದೆ.
ಸಂಘಟಕರು ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದಾಳಿಗಳನ್ನು ಖಂಡಿಸುವ ಉದ್ದೇಶದಿಂದ ಎಲ್ಲಾ ಜನರನ್ನು ಮೆರವಣಿಗೆಯಲ್ಲಿ ಭಾಗವಹಿಸಿ, ಒಗ್ಗಟ್ಟಿನ ಸಂದೇಶ ನೀಡುವಂತೆ ಆಹ್ವಾನಿಸಿದ್ದಾರೆ. ಹಿಂದೂವಿನ ಮೇಲೆ ನಡೆದಿರುವ ಧಾಳಿಗೆ ಹಿಂದೂಗಳೇ ಒಗ್ಗಟ್ಟಾಗಿ ಉತ್ತರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
"ಇದು ಕೇವಲ ಪ್ರತಿಭಟನೆ ಅಲ್ಲ, ಹಿಂದೂ ಸಮಾಜದ ಆತ್ಮಘೋಷಣೆ," ಎಂದು ಸಂಘಟನೆಯ ಪ್ರತಿನಿಧಿಗಳು ತಿಳಿಸಿದ್ದಾರೆ.