ಪುತ್ತೂರು: ಮಾತೃಭೂಮಿ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಭಯೋತ್ಪಾದಕ ದಾಳಿಗೆ ಖಂಡನೆ ಸೂಚಿಸಿ ಹಾಗೂ ದಾಳಿಯಲ್ಲಿ ಮೃತರಾದ ಸಹೋದರರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಬೃಹತ್ ಪ್ರತಿಭಟನಾ ಸಭೆ ಮತ್ತು ಸಂತಾಪ ಸಭೆಯು ಇಂದು ಸಂಜೆ ವಿಟ್ಲ ಪುತ್ತೂರಿನಲ್ಲಿ ನಡೆಯಲಿದೆ.
“ಭಯೋತ್ಪಾದಕನು ಗುಂಡಿಕ್ಕುವ ಮುನ್ನ ನಿನ್ನ ಜಾತಿ ಕೇಳೋದಿಲ್ಲ, ಪಕ್ಷ ಕೇಳೋದಿಲ್ಲ, ಭಾಷೆ ಕೇಳೋದಿಲ್ಲ, ರಾಜ್ಯ ಕೇಳೋದಿಲ್ಲ. ಅವನು ಕೇಳುವುದು ನೀನು ಹಿಂದುನಾ ಎಂಬವುದು ಮಾತ್ರ,” ಎಂಬ ತೀಕ್ಷ್ಣ ಹಾಗೂ ತಾತ್ವಿಕ ಸಂದೇಶದೊಂದಿಗೆ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ದೇಶದ ಭದ್ರತೆ ಮತ್ತು ಮಾನವೀಯ ಮೌಲ್ಯಗಳ ರಕ್ಷಣೆಗೆ ಇದೊಂದು ಎಚ್ಚರಿಕೆಯ ಕರೆ ಎಂಬ ರೀತಿಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ.
ಸಮಾರಂಭವು ಇಂದು ಸಂಜೆ 6 ಗಂಟೆಗೆ ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆ ಸಮೀಪ ನಡೆಯಲಿದೆ. ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಭದ್ರತೆಯ ಪರವಾದ ಧ್ವನಿಗೆ ಬಲ ನೀಡಬೇಕೆಂದು ಆಯೋಜಕರು ಕರೆ ನೀಡಿದ್ದಾರೆ.
ಪ್ರತಿಯೊಬ್ಬ ಹಿಂದೂ ಕೂಡ ಒಗ್ಗಟ್ಟಾಗಿ ನಿಂತು ಇದರ ವಿರುದ್ಧ ದ್ವನಿ ಎತ್ತಲೇ ಬೇಕು. ಇಲ್ಲವಾದಲ್ಲಿ ಮುಂದೊಂದಿನ ಯಾವಾಗ್ ಎಲ್ಲಿ ಯಾವ ಹಿಂದೂ ಎಂದು ಹೇಳಲಸಾಧ್ಯ.