ಪಹಲ್ಗಾಮ್ ದಾಳಿಯ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ – ಬಂಟ್ವಾಳದಲ್ಲಿ ನಾಳೆ ಸಂಜೆ 6 ಕ್ಕೆ ಪ್ರತಿಭಟನೆ ಘೋಷಣೆ!

  • 23 Apr 2025 10:09:17 PM


ಬಂಟ್ವಾಳ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ನಡೆಸಿದ ಅಮಾನವೀಯ ದಾಳಿಯಲ್ಲಿ 27ಕ್ಕೂ ಹೆಚ್ಚು ಅಮಾಯಕರ ಪ್ರವಾಸಿಗರು ಮೃತಪಟ್ಟಿರುವ ಘಟನೆ ಆಕ್ರೋಶವನ್ನುಂಟು ಮಾಡಿದೆ.

 

 ಧರ್ಮ ಕೇಳಿ ಹಿಂದೂಗಳ ಮೇಲಷ್ಟೇ ಗುಂಡು ಹಾರಿಸಿದ ಈ ನೀಚ ಕೃತ್ಯವನ್ನು ಭಾರತೀಯರು ಕಠಿಣವಾಗಿ ಖಂಡಿಸಿದ್ದಾರೆ.

 

ಈ ಕುರಿತಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಪ್ರತಿಕ್ರಿಯಿಸಿ, “ಅಮಾಯಕರ ಪ್ರಾಣ ಹರಣ ಮಾಡಿರುವ ಈ ಉಗ್ರರ ಕೃತ್ಯಕ್ಕೆ ಪಾಕಿಸ್ಥಾನಿ ಮೌಲ್ಯಗಳ ನಿಜಸ್ವರೂಪ ಬಯಲಾಗಿದ್ದು, ಈ ಕ್ರೂರತೆಗೆ ತಕ್ಕ ಶಿಕ್ಷೆ ಖಚಿತ. ದೇಶದ ಭದ್ರತೆಯನ್ನು ಗಟ್ಟಿಯಾಗಿ ಕಾಪಾಡುತ್ತಿರುವ ಕೇಂದ್ರ ಸರಕಾರ, ಈ ಘಟನೆಗೂ ಸಮರ್ಥ ಪ್ರತಿಸ್ಪಂದನ ನೀಡಲಿದೆ” ಎಂದರು.

  

 

ಹಾಗೆಯೇ ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ, ಕುಟುಂಬಗಳಿಗೆ ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. 

 

ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ದೇಶದಲ್ಲಿ ಶಾಂತಿ ಮತ್ತು ಒಗ್ಗಟ್ಟನ್ನು ಕಾಪಾಡಲು ಕೇಂದ್ರ ಸರಕಾರ ಬದ್ಧವಾಗಿದೆ” ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಹೇಳಿದ್ದಾರೆ.

 

ಈ ಪೈಶಾಚಿಕ ದಾಳಿಯ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಲು ನಾಳೆ ಸಂಜೆ 6 ಗಂಟೆಗೆ ಬಿಸಿ ರೋಡ್ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಲಿದೆ.

 

ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ದೇಶದ ಭದ್ರತೆ ಮತ್ತು ಹಿಂದೂಗಳ ರಕ್ಷಣೆಗೆ ಧ್ವನಿ ಎತ್ತಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.