ಜಮ್ಮು ಕಾಶ್ಮೀರ: ಪಹಲ್ಗಾಮ್ನಲ್ಲಿ ನಡೆದ ಭಯಾನಕ ಉಗ್ರ ದಾಳಿಯಲ್ಲಿ 25 ಭಾರತೀಯರು ಹಾಗೂ ಒಬ್ಬ ನೇಪಾಳಿ ಪ್ರಜೆ ಮೃತಪಟ್ಟಿರುವ ಘಟನೆ ದೇಶವನ್ನು ನಡುಗಿಸಿಟ್ಟಿದೆ.
ದಾಳಿಗೆ ಸಂಬಂಧಿಸಿದಂತೆ ಶಂಕಿತ ಮೂವರು ಉಗ್ರರ ರೇಖಾಚಿತ್ರಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇವರ ಬಂಧನಕ್ಕೆ ಸಹಾಯ ಮಾಡುವ ಮಾಹಿತಿ ಕೊಡುವವರಿಗೆ ಪೊಲೀಸರು 20 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.
ಶಂಕಿತ ಉಗ್ರರು:
ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ (ಪಾಕಿಸ್ತಾನ)
ಅಲಿ ಭಾಯಿ ಅಲಿಯಾಸ್ ತಲ್ಹಾ ಭಾಯಿ (ಪಾಕಿಸ್ತಾನ)
ಅಬ್ದುಲ್ ಹುಸೇನ್ ಥೋಕರ್ (ಅನಂತನಾಗ್, ಜಮ್ಮು ಮತ್ತು ಕಾಶ್ಮೀರ)
ಇವರು ಲಷ್ಕರ್-ಎ-ತೈಬಾ ಎಂಬ ಪಾಕಿಸ್ತಾನ ಆಧಾರಿತ ಉಗ್ರ ಸಂಘಟನೆಯ ಸದಸ್ಯರಾಗಿದ್ದಾರೆಂದೂ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರೆಂದು ಭದ್ರತಾ ಇಲಾಖೆ ಶಂಕಿಸಿದೆ.
ಜನಸಾಮಾನ್ಯರಿಂದ ಸಹಕಾರ ನಿರೀಕ್ಷಿಸಿರುವ ಪೊಲೀಸರು, ಶೀಘ್ರದಲ್ಲಿ ಈ ಭಯೋತ್ಪಾದಕರನ್ನು ಬಂಧಿಸಿ ನ್ಯಾಯಕ್ಕೆ ಒಪ್ಪಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.