ಕಲ್ಲಡ್ಕ: ಇತ್ತೀಚೆಗಷ್ಟೆ ಕಲ್ಲಡ್ಕ ಸಮೀಪದ ನೆಟ್ಲ ಶ್ರೀ ಕ್ಷೇತ್ರ ಕಲ್ಲಗುಡ್ಡೆಯಲ್ಲಿ ಮಂತ್ರ ದೇವತೆ ಹಾಗೂ ಕೊರಗಜ್ಜ ಕೊರಗಜ್ಜ ದೈವದ ವರ್ಷಾವಧಿ ಕೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ ದೈವದ ಆಶೀರ್ವಾದ ಪಡೆದರು.
ಈ ಅಪೂರ್ವ ಸಂದರ್ಭದಲ್ಲಿ, ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ, ಸುಳ್ಯ ಕ್ಷೇತ್ರದ ಶಾಸಕರಾದ ಭಗೀರಥ, ಮುರಲ್ಯ, ದಿನೇಶ್ ಅಮ್ಕೂರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದು, ಶ್ರೀ ದೈವದ ಗಂಧ ಹಾಗೂ ಪ್ರಸಾದವನ್ನು ಸ್ವೀಕರಿಸಿದರು.