ಕುಡಿಯುವ ನೀರು ಕಡಿತ: ನೋಟಿಸ್ ಬಗ್ಗೆ ಜನರ ಅಸಮಾಧಾನ ????

  • 05 Nov 2024 02:39:00 PM

ಮಂಜೇಶ್ವರ : ವರ್ಕಾಡಿ ಮತ್ತು ಮಂಜೇಶ್ವರ ಪಂಚಾಯತ್‌ಗಳಲ್ಲಿ 7 ನವೆಂಬರ್ ರಿಂದ 9 ನವೆಂಬರ್ 2024 ರವರೆಗೆ ಕುಡಿಯುವ ನೀರಿನ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನೋಟಿಸ್ ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.

 

*ನಮ್ಮಲ್ಲಿ ಬೇರೆ ನೀರಿಗೆ ಪರ್ಯಾಯ ವ್ಯವಸ್ಥೆ ಇಲ್ಲ, ಶೇಖರಿಸಲು ಸಹ ಸಾಧ್ಯವಾಗುತ್ತಿಲ್ಲ* ಎಂದು ನಾಗರಿಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

 

ನೀರು ಕಡಿತದ ಸಮಸ್ಯೆಗೆ ಪರಿಹಾರವನ್ನು ನೀವೇ ಒದಗಿಸಬೇಕು ಎಂದು ನಾಗರಿಕರು ನೀರಾವರಿ ಯೋಜನೆಗೆ ಮನವಿ ಮಾಡಿದ್ದಾರೆ.