ಪೆರ್ಲ: ರವಿವಾರ (ನಿನ್ನೆ) ಸಂಜೆ ಬಿರುಸು ಮಳೆಯ ಜೊತೆಗೆ ಗುಡುಗುಗು ಮಿಂಚಿನಿಂದ ಪುತ್ತಿಗೆ ಪಂಚಾಯಿತಿಯ ದೇರಡ್ಕ ಸಮೀಪ ನೆಕ್ಕರೆಪದವಿನ ವಿಜಯ್ ಕುಮಾರ್ ಮನೆಯ ಮೇಲೆ ಸಿಡಿಲು ಬಡಿದ ಘಟನೆ ನಡೆದಿದೆ.
ಅವರ ಮನೆಯ ಕರೆಂಟ್ ಮೈನ್ ಸ್ವಿಚ್, ಮೀಟರ್ ಮತ್ತು ವೈರಿಂಗ್ಗಳಿಗೆ ಹಾನಿಯಾಗಿದೆ. ಈ ಪರಿಣಾಮವಾಗಿ ಗೃಹೋಪಯೋಗಿ ವಸ್ತುಗಳು ಕೂಡ ಹಾನಿಯಾಗಿ ಸಾವಿರಾರು ರೂಗಳ ನಷ್ಟ ಸಂಭವಿಸಿದೆ.