ಮಂಗಳೂರೂ: ಬಜ್ಪೆಯಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಅಂತ್ಯಕ್ರಿಯಗೆ ಭಾಗವಹಿಸಿದ , ಶಾಸಕ ಬಸವನಗೌಡ ಪಾಟೀಲ್ ಯತ್ನಲ್ ಕುಟುಂಬಕ್ಕೆ ಸಾಂತ್ವನ ಹೇಳಿ ತಕ್ಷಣವೇ ಅವರು ರೂ.5 ಲಕ್ಷ ಸಹಾಯಧನವನ್ನು ಘೋಷಿಸಿದ್ದರು.
ಈ ನಿಟ್ಟಿನಲ್ಲಿ ನಿನ್ನೆ ತಮ್ಮ ಆಪ್ತ ಸಹಾಯಕರನ್ನು ಬಂಟ್ವಾಳ ತಾಲ್ಲೂಕಿನ ಕಾರಿಂಜ ಗ್ರಾಮದಲ್ಲಿರುವ ಶೆಟ್ಟಿ ಕುಟುಂಬದ ತೋಟದ ಮನೆಗೆ ಕಳುಹಿಸಿ, ಸುಹಾಸ್ ಶೆಟ್ಟಿ ಅವರ ತಂದೆ ಮತ್ತು ತಾಯಿಗೆ ಸಹಾಯಧನದ ಚೆಕ್ ನೀಡುವ ಮೂಲಕ ತಮ್ಮ ಮಾತಿಗೆ ನಿಷ್ಠಾವಂತಿಕೆ ತೋರಿಸಿದರು.