ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು: ಪೊಲೀಸರಿಂದಲೇ ಮಾಹಿತಿ ಲೀಕ್ ಆಗಿದೆಯೇ??

  • 07 May 2025 03:39:37 PM


ಮಂಗಳೂರು: ಹಿಂದೂ ಸಂಘಟನೆಯ ಯುವ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಹಿಡಿದುಕೊಳ್ಳುತ್ತಿವೆ. 

 

 

ಇದೀಗ ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಕೈವಾಡವಿದೆ ಆರೋಪ ಕೇಳಿಬಂದಿವೆ. ಬಜಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಶೀದ್ ಅವರು ಈ ಹತ್ಯೆಯಲ್ಲಿ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂಬ ಶಂಕೆ ಹುಟ್ಟಿಸಿರುವುದು ಸಾರ್ವಜನಿಕರಲ್ಲಿ ಆಘಾತ ಉಂಟುಮಾಡಿದೆ.

 

ಹತ್ಯೆಯ ನಂತರದ ತನಿಖೆಯಲ್ಲಿ, ಫಾಝಿಲ್ ಎಂಬಾತನು ಸುಹಾಸ್ ಶೆಟ್ಟಿಯ ಹತ್ಯೆಗೆ ಆದಿಲ್ ಮತ್ತು ಮೆಹರೂಫ್ ಎಂಬವರನ್ನು ಸುಫಾರಿ ಕಿಲ್ಲರ್ ಆಗಿ ಬಳಸಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದ್ದವು ಆದರೆ ಆ ಬಳಿಕ ಈ ಹತ್ಯೆಗೆ ನಿಷೇಧಿತ ಸಂಘಟನೆ ಪಿಎಫ್‌ಐ ಕೈಹಾಕಿರುವ ಶಂಕೆಗಳ ಮೆಲುಕುಹಾಕಿದವು.

 

 ಈಗ ಈ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಸೇರ್ಪಡೆ ಎಂಬ ವಿಚಾರ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿದೆ.

 

ಹತ್ಯೆಗೆ ಮುನ್ನ ಒಂದು ವಾರದ ಹಿಂದೆ ಹೆಡ್ ಕಾನ್ಸ್‌ಟೇಬಲ್ ರಶೀದ್, ಸುಹಾಸ್ ಶೆಟ್ಟಿಯನ್ನು ಠಾಣೆಗೆ ಕರೆಸಿ ‘ಮಾರಕಾಸ್ತ್ರ ಇಟ್ಟುಕೊಳ್ಳುವಂತಿಲ್ಲ’, ‘ಹೆಚ್ಚಾಗಿ ಓಡಾಡಬೇಡ’, ‘ಯಾರೊಂದಿಗೆ ಜಾಸ್ತಿ ತಿರುಗಬೇಡ’ ಎಂದು ಎಚ್ಚರಿಸಿದ್ದರು. ಈ ಮಾತುಗಳಿಂದಾಗಿ ಅವರು ಸುಹಾಸ್‌ ಶೆಟ್ಟಿಯ ಚಲನೆಗಳನ್ನು ಗಮನಿಸಿ ಹಂತಕರಿಗೆ ಮಾಹಿತಿಯನ್ನು ಪೂರೈಸಿದ್ದಾರೆ ಎಂಬ ಗಂಭೀರ ಆರೋಪವನ್ನು ವಿಶ್ವ ಹಿಂದು ಪರಿಷತ್‌ನ ಶರಣ್ ಪಂಪ್‌ವೆಲ್ ಹಾಗೂ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಕೆ.ಟಿ. ಉಲ್ಲಾಸ್ ಮಾಡಿದ್ದಾರೆ.

 

ಈ ಆರೋಪಗಳು ಬೆಳೆದುಕೊಂಡಂತೆ, ಬಜಪೆ ಠಾಣೆಯ ರಶೀದ್ ಅವರನ್ನು ಈಗಾಗಲೇ ಪ್ರಕರಣದ ತನಿಖೆಯಿಂದ ದೂರವಿಡಲಾಗಿದೆ. ಆದರೆ ಹಿಂದೂ ಸಂಘಟನೆಗಳ ದೃಷ್ಟಿಯಿಂದ ಇದಷ್ಟು ಸಾಕಾಗಿಲ್ಲ. ಅವರು ನೇರ ತನಿಖೆಗಾಗಿ ಎನ್‌ಐಎಗೆ ಪ್ರಕರಣ ಹಸ್ತಾಂತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. 

 

ಈ ಮೂಲಕ ಸಂಪೂರ್ಣ ಸತ್ಯ ಬಯಲಾಗುವ ಭರವಸೆ ಇದೆ ಎಂಬುದಾಗಿ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

 

ಸುದ್ದಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸ್ ವ್ಯವಸ್ಥೆಯ ನಂಬಿಕೆಗೆ ಭಂಗ ಉಂಟಾಗುತ್ತಿದೆ ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ.