ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಇದರ ವತಿಯಿಂದ ಇಂದು ದಿನಾಂಕ 07.05.2025ರಂದು ಮುಂಡೂರು ಗ್ರಾಮದ ಬದಿಯಡ್ಕ ದಲ್ಲಿರುವ ಸರಕಾರಿ ಗೋಮಾಳ ಜಾಗವನ್ನು ಗೋಶಾಲೆ ಮಾಡಲು ಪುತ್ತೂರಿನ ಪ್ರತಿಷ್ಠಿತ ಸಮಾಜಸೇವಾ ಟ್ರಸ್ಟ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಗೆ ಹಸ್ತಾಂತರ ಮಾಡಬೇಕಾಗಿ ಮನವಿ ಪತ್ರ ವನ್ನ ಮಾನ್ಯ ಜಿಲ್ಲಾ ಅಧಿಕಾರಿ , ಮತ್ತು ತಾಲೂಕು ತಹಶೀಲ್ದಾರ್, ಹಾಗೂ ತಾಲೂಕ್ ಅಸಿಸ್ಟೆಂಟ್ ಕಮಿಷನರ್ ಮೂಲಕ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕರಾದ ಶ್ರೀ ಅರುಣ್ ಕುಮಾರ್ ಪುತ್ತಿಲರವರು ಅರ್ಪಿಸಿದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷರಾದ, ಶ್ರೀ ಮಹೇಂದ್ರವರ್ಮ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಪ್ರಸನ್ನ ಮಾರ್ತ,ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ, ರವಿಕುಮಾರ್ ರೈ ಕೆದಂಬಾಡಿ ಮಠ, ಟ್ರಸ್ಟಿನ ಕೋಶಾಧಿಕಾರಿ ಶ್ರೀ ಗಣೇಶ ಭಟ್ ಮಕರಂದ, ನಿರ್ದೇಶಕರಾದ ಶ್ರೀ ರಾಜು ಶೆಟ್ಟಿ, ಶ್ರೀ ಜನಾರ್ದನ ಕುರೆ ಮಜಲು, ಬಿಜೆಪಿ ಆರ್ಯಪು ಶಕ್ತಿಕೇಂದ್ರ ಅಧ್ಯಕ್ಷರಾದ ಶ್ರೀ ಪ್ರಜ್ವಲ್ ಘಾಟೆ, ಶ್ರೀ ರೂಪೇಶ್ ಪುತ್ತೂರು,ಶ್ರೀ ಪ್ರಕಾಶ್ ಚಿಕ್ಕಮುಡ್ನೂರು ಶ್ರೀ ಬಾಲಚಂದ್ರ ಸೊರಕೆ ಶ್ರೀ ಮನಿಷ್ ಕುಲಾಲ್ ಪುತ್ತೂರು ಹಾಗೂ ಹಲವಾರು ಟ್ರಸ್ಟಿನ ಪದಾಧಿಕಾರಿಗಳು ಮತ್ತು ಇನ್ನಿತರರು ಉಪಸ್ಥಿತರದ್ದರು.