ಸೇನಾ ಕಾರ್ಯಾಚರಣೆಯ ರಿಯಲ್ ಟೈಂ ವರದಿಗೆ ತಡೆಯಾಜ್ಞೆ: ಭದ್ರತಾ ದೃಷ್ಟಿಯಿಂದ ರಕ್ಷಣಾ ಇಲಾಖೆಯ ಕಟ್ಟುನಿಟ್ಟಿನ ಸೂಚನೆ!

  • 09 May 2025 04:23:08 PM


ದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿನ ದಾಳಿ ಮತ್ತು ಪ್ರತಿದಾಳಿ ತೀವ್ರಗೊಳ್ಳುತ್ತಿದ್ದು ಈ ಸಂಬಂಧ ದೇಶದ ವಿವಿಧ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ನಿರಂತರ ನೇರ ಪ್ರಸಾರ ನಡೆಯುತ್ತಿರುವುದು ಭದ್ರತಾ ದೃಷ್ಟಿಯಿಂದ ಅಪಾಯಕಾರಿ ಎಂದು ರಕ್ಷಣಾ ಇಲಾಖೆ ನೇರಪ್ರಸಾರ ಬೇಡ ಎಂದು ಮನವಿ ಮಾಡಿಕೊಂಡಿದೆ.

 

 ನೇರ ಪ್ರಸಾರ ನಿಲ್ಲಿಸಿ

ಈ ಕುರಿತು ಸಂದೇಶ ನೀಡಿರುವ ರಕ್ಷಣಾ ಸಚಿವಾಲಯ, ನೇರ ಪ್ರಸಾರದಿಂದ ಭಾರತೀಯ ಸೇನೆಯ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದೆ.

 

 ಭದ್ರತಾ ಪಡೆಗಳ ಚಲನೆಗಳು ಸಾರ್ವಜನಿಕವಾಗಿ ಬಹಿರಂಗವಾಗುವುದರಿಂದ ಶತ್ರು ರಾಷ್ಟ್ರಕ್ಕೆ ಸುಲಭವಾಗಿ ಮಾಹಿತಿ ಲಭ್ಯವಾಗಬಹುದು ಎಂಬ ಆತಂಕ ಮೂಡಿಸಿದೆ.

 

ಯುದ್ಧದ ಮನೋಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳ ಸಮರ್ಥ ನಿರ್ವಹಣೆ ಮತ್ತು ಸೈನಿಕರ ರಕ್ಷಣೆ ತೀವ್ರ ಅಗತ್ಯವಾಗಿದೆ ಎಂಬ ದೃಷ್ಟಿಯಿಂದ, ಎಲ್ಲಾ ಮಾಧ್ಯಮಗಳು ಮತ್ತು ಡಿಜಿಟಲ್ ವೇದಿಕೆಗಳು ಸೇನೆಗೆ ಸಂಬಂಧಿಸಿದ ಯಾವುದೇ ನೇರ ಪ್ರಸಾರ ಅಥವಾ ತಕ್ಷಣದ ವರದಿಗಳನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ರಕ್ಷಣಾ ಇಲಾಖೆ ನೀಡಿರುತ್ತದೆ.

 

ಸೂಕ್ಷ್ಮ ಮಾಹಿತಿಯ ಬಹಿರಂಗೀಕರಣ ಸೇನೆಯ ತಂತ್ರ ರೂಪಣೆಗೆ ತೊಂದರೆಯದೀತು ಎಂಬುದಾಗಿ ಪರಿಗಣಿಸಬೇಕಾಗಿದೆ.