ಶ್ರೀ ನಗರ: ಪಾಕಿಸ್ತಾನದ ನಿರಂತರ ದಾಳಿಗಳಿಗೆ ಭಾರತ ಪ್ರತಿ ಉತ್ತರ ನೀಡುತ್ತಿರುವ ನಡುವೆಯೇ, ಶನಿವಾರ ಮುಂಜಾನೆ ಮತ್ತೊಮ್ಮೆ ಪಾಕ್ ತನ್ನ ದುಷ್ಟತನವನ್ನು ತೋರಿಸಿದೆ.
ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ವಸತಿ ಪ್ರದೇಶದ ಮೇಲೆ ಶೆಲ್ ದಾಳಿ ನಡೆಸಿದ್ದು, ಈ ಕ್ರೂರ ದಾಳಿಯಲ್ಲಿ ಉನ್ನತ ಹುದ್ದೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿರುವ ಶೋಕಾಂತಿಕ ಸುದ್ದಿ ಇದೀಗ ಹೊರಬಿದ್ದಿದೆ.
ಪಾಕಿಸ್ತಾನ ಸೇನೆಯು ರಾಜೌರಿ ಪಟ್ಟಣದಲ್ಲಿರುವ ಹೆಚ್ಚುವರಿ ಉಪ ಆಯುಕ್ತ ರಾಜ್ ಕುಮಾರ್ ಥಾಪಾ ಅವರ ಅಧಿಕೃತ ನಿವಾಸದ ಮೇಲೆ ಫಿರಂಗಿ ಶೆಲ್ ದಾಳಿ ನಡೆಸುರುತ್ತದೆ.
ಈ ದಾಳಿಯ ಪರಿಣಾಮವಾಗಿ ಥಾಪಾ ಅವರೊಬ್ಬರೇ ಅಲ್ಲದೆ, ಅವರ ಜೊತೆಯಲ್ಲಿದ್ದ ಇಬ್ಬರು ಸಿಬ್ಬಂದಿಗಳಿಗೆ ಕೂಡ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಗಾಯಗೊಂಡ ರಾಜ್ ಕುಮಾರ್ ಥಾಪಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ದುರ್ಮರಣ ಹೊಂದಿದ್ದಾರೆ.
ಈ ಆಘಾತಕಾರಿ ಘಟನೆಯ ಕುರಿತು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾದ ಒಮರ್ ಅಬ್ದುಲ್ಲಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಕ್ಸ್ನಲ್ಲಿ ಮಾಡಿದ ತಮ್ಮ ಪೋಸ್ಟ್ನಲ್ಲಿ ಅವರು, “ಇದು ತುಂಬಾ ದುಃಖದ ಕ್ಷಣ. ನಿನ್ನೆ ನಾನೇ ಭದ್ರತೆಯ ವಿಚಾರವಾಗಿ ಸಭೆ ನಡೆಸಿದ್ದೆ. ಈ ಸಭೆಯಲ್ಲಿ ಥಾಪಾ ಅವರೂ ಭಾಗಿಯಾಗಿದ್ದರು. ಆದರೆ ಇಂದು ಬೆಳಿಗ್ಗೆ ಪಾಕಿಸ್ತಾನದಿಂದ ಆಗಿರುವ ಈ ಶೆಲ್ ದಾಳಿ ಅವರ ಜೀವವನ್ನು ಕಿತ್ತುಕೊಂಡಿದೆ” ಎಂಬುದು ದುಃಖಕಾರವಾದ ವಿಷಯ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
“ಅವರು ರಾಜೌರಿ ಜಿಲ್ಲೆಗೆ ಸೇವೆ ಸಲ್ಲಿಸುತ್ತಿದ್ದ ಶ್ರೇಷ್ಠ ಅಧಿಕಾರಿ ಅವರ ಸಾವಿಗೆ ನಾನು ಪದಗಳು ಇಲ್ಲದೆ ಆಘಾತಗೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ತಮ್ಮ ಸಂತಾಪ ಪೋಸ್ಟ್ ಮೂಲಕ ತಿಳಿಸಿದ್ದಾರೆ.