ಕಾರ್ಕಳ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ನಡುವೆಯೇ ಶತ್ರುರಾಷ್ಟ್ರ ಪಾಕಿಸ್ತಾನವು ಸೈಬರ್ ಯುದ್ಧವನ್ನೂ ಮುಂದುವರಿಸಿದೆ ಎನ್ನುವ ಮಾಹಿತಿ ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿಡಿದ್ದು ಇದೀಗ ಒಂದು ಅನುಮಾನಾಸ್ಪದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಈ ಪೈಪೋಟಿಯ ನಡುವೆಯೇ ಕಾರ್ಕಳ ತಾಲೂಕಿನ ಬಜಗೋಳಿ ಪ್ರದೇಶದ ಯುವಕನೊಬ್ಬನಿಗೆ ಪಾಕಿಸ್ತಾನ ಮೂಲದ ನಂಬರ್ನಿಂದ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣ ಉಂಟು ಮಾಡಿದೆ.
ಬಜಗೋಳಿಯ ಸುಶಾಂತ್ ಎಂಬವರಿಗೆ ಪಾಕಿಸ್ತಾನದ ಮೊಬೈಲ್ ನಂಬರ್ನಿಂದ “Hi, How are you?” ಎಂಬ ಸಂದೇಶ ಬಂದಿದ್ದು ಈ ಅಪರಿಚಿತ, ಶಂಕಿತ ಮೂಲದಿಂದ ಬಂದ ಮೆಸೇಜ್ ಅವರಿಗೆ ಅಸಮಾನ್ಯವಾಗಿದೆ ಎಂಬ ಅನುಮಾನವನ್ನು ಮೂಡಿಸಿದ್ದು, ಕೂಡಲೇ ಅವರು ಪ್ರತಿಕ್ರಿಯೆ ನೀಡದೆ ನೇರವಾಗಿ ಬ್ಲಾಕ್ ಮಾಡಿದ್ದಾರೆ ಎಂದು ತಿಳಿಸಿದು ಬಂದಿದೆ.
ಇಂತಹ ಸಂದೇಶಗಳು ಸಾಮಾನ್ಯ ನಾಗರಿಕರಲ್ಲಿ ಭಯದ ಮರುಳನ್ನುಂಟುಮಾಡುವ ಸಾಧ್ಯತೆಯಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾರ್ಕಳ ಎಎಸ್ಪಿ ಡಾ. ಹರ್ಷಪ್ರಿಯಂವದ, ಪಾಕಿಸ್ತಾನದಿಂದ ಈ ರೀತಿಯ ಸಂದೇಶಗಳು ಬರಬಹುದಾದ ಸಾಧ್ಯತೆಗಳಿವೆ. ಅಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದರಿ ಎಂದೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಕೂಡಲೇ ಬ್ಲಾಕ್ ಮಾಡಬೇಕು ಎಂಬ ಸಲಹೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತೆಯಿಂದ ಇರಲು ಮತ್ತು ಶಂಕಾಸ್ಪದ ಸಂಪರ್ಕಗಳ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದ್ದಾರೆ.