ದ.ಕ: ಹಿಂದೂ ಸಮಾಜದ ಸಹಕಾರದಿಂದ ಯುವಶಕ್ತಿ ಸೇವಾಪಥದ ಮೂಲಕ ಸಂಗ್ರಹಿಸಲಾದ ರೂ. 2,40,000 (ಎರಡು ಲಕ್ಷ ನಲವತ್ತು ಸಾವಿರ) ಮೊತ್ತವನ್ನು ಇಂದು ಸುಹಾಸ್ ಶೆಟ್ಟಿ ಅವರ ಪೋಷಕರಿಗೆ ಹಸ್ತಾಂತರಿಸಲಾಯಿತು.
ಸುಹಾಸ್ ಶೆಟ್ಟಿ ಅಮರ್ ರಹೇ – ಸರ್ವವೂ ಸಮಾಜಕ್ಕರ್ಪಿತ ಎಂಬ ಘೋಷಣೆಯೊಂದಿಗೆ ಈ ನೆರವು ವಿತರಣೆ ನಡೆಯಿತು. ಸಮಾಜದ ಭಾಗವಹಿಸುವಿಕೆಯಿಂದ ಈ ಕಾರ್ಯ ಸಾಧ್ಯವಾಗಿದ್ದು, ಜನತೆ ಸ್ಪಂದಿಸಿದ ರೀತಿಗೆ ಯುವಶಕ್ತಿ ಕೃತಜ್ಞತೆ ವ್ಯಕ್ತಪಡಿಸಿದೆ.