ಮಂಗಳೂರು ಶ್ರೀ ವಜ್ರದೇಹಿ ಮಠದಲ್ಲಿ ನರಸಿಂಹ ಜಯಂತಿಯ ಅಂಗವಾಗಿ ಸೈನಿಕರ ಕ್ಷೇಮ ಭದ್ರತೆಗಾಗಿ ವಿಶೇಷ ನರಸಿಂಹ ಸೂಕ್ತ ಹವನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ದಿವ್ಯ ಉಪಸ್ಥಿತಿಯನ್ನು ನೀಡಿದರು.ಈ ಹವನ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ನೇತೃತ್ವದಲ್ಲಿ ನೆರವೇರಿಸಲಾಯಿತು.
ವೇದಮೂರ್ತಿ ಪ್ರಜ್ವಲ್ ಭಟ್ ರವರು ಪೌರೋಹಿತ್ಯವನ್ನು ನಿರ್ವಹಿಸಿದರು. ಭಕ್ತರು, ಮಠದ ಶಿಷ್ಯವೃಂದ ಮತ್ತು ಸ್ಥಳೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶಹಿತದ ಪ್ರಾರ್ಥನೆಗೂ ಜೊತೆಯಾದರು.