ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ಎಂಟು ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಹತ್ವದ ಭಾಷಣ ನೀಡಲಿದ್ದಾರೆ.
ಅವರ ಭಾಷಣದಲ್ಲಿ ಏನು ಘೋಷಣೆ ಹೊರಬೀಳಲಿದೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ಮೋದಿ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ. ಇದರಿಂದಾಗಿ, ಇಂದು ದಿಢೀರ್ ಅವರು ಮಾತನಾಡಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರವಾದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಈ ಹಿಂದೆಯೇ, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ “ಮರೆಯಾದವರ ಬಲಿದಾನ ವ್ಯರ್ಥವಾಗಲಿಕ್ಕಿಲ್ಲ” ಎಂಬ ಕಠಿಣ ಹೇಳಿಕೆ ನೀಡಿದ ಅವರು, "ಒಬ್ಬೊಬ್ಬ ಉಗ್ರನನ್ನು ಅವನು ಎಲ್ಲಿ ಅಡಗಿದರೂ ಹುಡುಕಿ ಹೊಡೆಯಲಾಗುವುದು" ಎಂದು ಎಚ್ಚರಿಸಿದ್ದರು.
ಇತ್ತೀಚಿನ ಬೆಳವಣಿಗೆಗಳನ್ನು ಹಿನ್ನಲೆಯಲ್ಲಿ, ಮೋದಿ ಅವರ ಈ ರಾತ್ರಿ ಭಾಷಣದಲ್ಲಿ ಏನಿರಬಹುದು ಎಂಬುದನ್ನ ಕಾದು ನೋಡಬೇಕಿದೆ.