ಸಂಪ್ಯ ಪೊಲೀಸರ ಮಿಂಚಿನ ಕಾರ್ಯಾಚರಣೆ ಅಕ್ರಮ ಗೋ ಸಾಗಾಟಕ್ಕೆ ಬ್ರೇಕ್. ??

  • 09 Nov 2024 06:29:39 PM


ಈಶ್ವರಮಂಗಿಲ: ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಗೋಸಾಟದ ವಾಹನವನ್ನು ದಿನಾಂಕ 9.11.2024 ರಂದು ಮುಂಜಾನೆಯ ಸಮಯದಲ್ಲಿ ಕರ್ನಾಟಕದಿಂದ ಕೇರಳಕ್ಕೆ ಗೋಸಾಗಾಟ ಮಾಡಲು ಯತ್ನಿಸಿದಾಗ ,ಸಂಪ್ಯ ಪೊಲೀಸರು ತಡೆದು, ಗೋವುಗಳನ್ನು ರಕ್ಷಿಸಿದ ಘಟನೆ ಈಶ್ವರಮಂಗಿಲದ ಬಳಿ ನಡೆದಿದೆ. 

 

ವಾಹನದಲ್ಲಿ 2 ಹೋರಿ, 2 ದನ, ಹಿಂಸಾತ್ಮಕ ರೀತಿಯಲ್ಲಿ ಹಾಗೂ 1 ಕರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು, ವಾಹನದಲ್ಲಿದ್ದ ದನಗಳನ್ನು ರಕ್ಷಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. 

 

ಅದೇ ರೀತಿ ಸಂಪ್ಯ ಪೊಲೀಸರ ಕಾರ್ಯಾಚರಣೆಗೆ ಶಭಾಷ್ ಹೇಳಿದ ಸ್ಥಳೀಯರು ....ಹಾಗೂ ಸಂಪ್ಯ ಠಾಣ ವ್ಯಾಪ್ತಿಯ ಅರ್ಲಪದವು ,ಸುಳ್ಯ ಪದವು ,ಈಶ್ವರ ಮಂಗಳ ಭಾಗದಲ್ಲಿ ನಿರಂತರ ಹಾಡು ಹಗಲು ಕೂಡ ಗೋ ಸಾಗಾಟ ನಡೆಯುತ್ತಿದೆ ಎಂದು ಸ್ಥಳೀಯರ ಬಲವಾದ ಆರೋಪ . ಗೋ ಸಾಗಾಟಕರನ್ನು ಮಟ್ಟ ಹಾಕಬೇಕು ಎಂದು ಸ್ಥಳಿಯ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ