ಮಂಗಳೂರು: ರಸ್ತೆ ದಟ್ಟಣೆ, ಅಪಘಾತ ಭೀತಿ: ಟ್ರಾಫಿಕ್ ಸಿಗ್ನಲ್ ಇಲ್ಲದ ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಜನರ ಜೀವದಾಟ!

  • 15 May 2025 03:27:17 PM


ಮಂಗಳೂರು : ಸೆಂಟ್ರಲ್ ರೈಲ್ವೇ ನಿಲ್ದಾಣದ ಹತ್ತಿರದ ಅತ್ತಾವರ ಕಡೆಗೆ ಸಾಗುವ ರಸ್ತೆಯಲ್ಲಿ ಪ್ರತಿದಿನವೂ ನಡೆಯುತ್ತಿರುವ ಭಾರೀ ವಾಹನ ದಟ್ಟಣೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. 

 

 "ಸ್ಮಾರ್ಟ್ ಸಿಟಿ" ಎಂಬ ಪದವಿ ಹೊತ್ತಿರುವ ಈ ನಗರದಲ್ಲಿ ಇನ್ನೂ ಮೂಲಭೂತ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದು ಶೋಚನೀಯ.

 

ಪ್ರಮುಖ ಸಾರ್ವಜನಿಕ ಸ್ಥಳವಾದ ರೈಲ್ವೇ ನಿಲ್ದಾಣದ ಪಕ್ಕದ ರಸ್ತೆಯಲ್ಲಿ ಸರಿಯಾದ ನಿಯಂತ್ರಣವಿಲ್ಲದೆ, ವಾಹನಗಳ ಸಂಚಾರ ಕಷ್ಟಕರವಾಗಿದೆ.

 

 ಟ್ರಾಫಿಕ್ ಪೊಲೀಸ್ ಇಲ್ಲದ ಕಾರಣ ಅಪಘಾತದ ಭೀತಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. "ಒಬ್ಬರು ಪ್ರಾಣ ಕಳೆದುಕೊಂಡ ಬಳಿಕವೇ ಕ್ರಮವೇ?" ಎಂಬ ಸಾರ್ವಜನಿಕರೂ ಪ್ರಶ್ನಿಸುತ್ತಿದ್ದಾರೆ??

 

ಅಪಘಾತ ಸಂಭವನೀಯ ಪ್ರದೇಶಗಳಲ್ಲಿ ಕನಿಷ್ಠ ಟ್ರಾಫಿಕ್ ಪೋಲೀಸರನ್ನಾದರೂ ನಿಯೋಜಿಸಬೇಕೆಂಬ ತುರ್ತು ಅವಶ್ಯಕತೆ ಎದುರಾಗಿದ್ರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನ ಸಾಮಾನ್ಯರ ದುಃಖ ನಿರಂತರವಾಗಿದೆ.