ಪುತ್ತೂರಿನಲ್ಲಿ ಸಂಚಲನ: ವಾಸ್ತು ತಜ್ಞನ ಪುತ್ರನಿಂದ ವಿದ್ಯಾರ್ಥಿನಿಗೆ ಗರ್ಭಧಾರಣೆ – ಮಹಿಳಾ ಠಾಣೆಗೆ ದೂರು

  • 16 May 2025 09:36:26 PM


ಸ್ವಯಂ ಘೋಷಿತ ವಾಸ್ತು ತಜ್ಞನಾಗಿರುವ ರಾಜಕೀಯ ನಾಯಕನ ಪುತ್ರ, ತನ್ನ ತರಗತಿಯೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಸಂಬಂಧ ಬೆಳೆಸಿಕೊಂಡು ಗರ್ಭವತಿಯಾಗಲು ಕಾರಣನಾಗಿರುತ್ತಾನೆ. ಈ ಘಟನೆ ಸ್ಥಳೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

 

ಈ ಬಗ್ಗೆ ವಿದ್ಯಾರ್ಥಿನಿಯ ಕುಟುಂಬದವರು ಪುತ್ತೂರಿನ ಮಹಿಳಾ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ವಿಷಯ ಗಂಭೀರ ಸ್ವರೂಪ ತಾಳಿದಾಗ ಯುವಕನ ಪೋಷಕರು ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ, ಹುಡುಗಿಯನ್ನೇ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

 

 

ಈ ಸಮ್ಮತಿಯನ್ನು ಪೊಲೀಸ್ ಠಾಣೆಯಲ್ಲಿಯೇ ಮುಟ್ಟಿಸಿ, ಪುತ್ತೂರಿನ ಒಬ್ಬ ಪ್ರಭಾವಿ ರಾಜಕಾರಣಿಯ ನೇತೃತ್ವದಲ್ಲಿ ಮದುವೆಗೆ ಸಮ್ಮತಿ ಸೂಚಕವಾಗಿ ವೀಳ್ಯದಲೆ-ಅಡಿಕೆ ಶಾಸ್ತ್ರ ಮಾಡಿಕೊಂಡಿದ್ದಾರೆ ಎಂಬಂತೆ ಆತನ ಪಕ್ಷದ ನಾಯಕರು ಗುಸೂಪಿಸು ಮಾತನಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

 

ಈ ಕುರಿತು ಆ ರಾಜಕಾರಣಿಯ ಪಕ್ಷದ ನಾಯಕರ ನಡುವೆ ಗುಸುಗುಸು ಚರ್ಚೆಗಳು ನಡೆಯುತ್ತಿದ್ದು, "ಬಾಣಂತಿಯ ನಂತರ ಮದುವೆ ಮಾಡ್ತಾರಾ? ಇಲ್ಲ ಮದುವೆ ಮುಂಚೆ ಮಾಂಗಲ್ಯ ಧರಿಸುತ್ತಾರಾ?" ಎಂಬ ಸಂಶಯಗಳೊಂದಿಗೆ ಪಕ್ಷದ ಕಚೇರಿಗಳಲ್ಲೇ ಪಿಸಿಪಿಸಿ ಮಾತನಾಡುತ್ತಾ ನಗು ಬೀರುತ್ತಿದ್ದಾರೆ. 

 

ಈ ಪ್ರಕರಣವು ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಬೆರಗಿನ ಕಥೆಯಾಗಿ ಮಾರ್ಪಟ್ಟಿದೆ.