ಪೆರ್ಲ: ಬಜಕೂಡ್ಲು ನಿವಾಸಿ ಬೇಬಿ ಅವರ ಪುತ್ರಿ ಶ್ರೀಮತಿ ಕಾವ್ಯಶ್ರೀ ರೈ (ಕಾವ್ಯಶ್ರೀ ಬಿ) ಅವರಿಗೆ ಬ್ಲಡ್ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆ ಕಾಣಿಸಿಕೊಂಡಿದ್ದು, ಅವರ ಬದುಕಿಗೆ ಭಾರೀ ದೊಡ್ಡ ಆಘಾತವನ್ನು ಉಂಟು ಮಾಡಿದೆ.
ಇತ್ತೀಚಿಗಷ್ಟೆ ವಿವಾಹವಾದ ಕಾವ್ಯಶ್ರೀ ಅವರ ಬದುಕಿನಲ್ಲಿ ಸಂತೋಷದ ಕ್ಷಣಗಳು ಕೇವಲ ಎರಡು ವಾರಗಳ ಕಾಲ ಮಾತ್ರ ಇರುವುದು ದುರಂತವಾಗಿದೆ.
ವೈದ್ಯಕೀಯ ತಪಾಸಣೆಯಲ್ಲಿ ಅವರಿಗೆ ಬ್ಲಡ್ ಕ್ಯಾನ್ಸರ್ ಎಂಬ ವಿಷಯ ತಿಳಿದು ಬಂದಿದ್ದು, ತಕ್ಷಣವೇ ಚಿಕಿತ್ಸೆ ಆರಂಭಿಸಬೇಕಾಗಿದೆ. ವೈದ್ಯರ ಪ್ರಕಾರ ಮೊದಲ ಹಂತದಲ್ಲಿರುವ ಈ ಕಾಯಿಲೆಗೆ ಸಂಪೂರ್ಣ ಗುಣಮುಖರಾಗಲು ಸುಮಾರು ರೂ. 25 ಲಕ್ಷ ವೆಚ್ಚವಾಗಲಿದೆ.
ಇವರ ಚಿಕಿತ್ಸೆಗಾಗಿ ಸಹೃದಯರು, ದಾನಿಗಳು ಹಾಗೂ ಹಿತೈಷಿಗಳ ಬೆಂಬಲ ಬಹುಅಗತ್ಯವಾಗಿದೆ. ನಿಮ್ಮಿಂದಾದ ಯಾವುದೇ ರೀತಿಯ ಆರ್ಥಿಕ ಸಹಾಯ ಕಾವ್ಯಶ್ರೀ ಅವರ ಜೀವ ಉಳಿಸುವುದಕ್ಕಾಗಿ ಸಹಾಯಹಸ್ತ ಬೇಕಾಗಿದೆ.
ಸಹಾಯ ಹಸ್ತ ನೀಡಲು ಬ್ಯಾಂಕ್ ವಿವರಗಳು ಈ ಕೆಳಗಿನಂತಿವೆ:
ಹೆಸರು: Kavyashree B
ಖಾತೆ ಸಂಖ್ಯೆ: 1019252500006501
ಬ್ಯಾಂಕ್: Karnataka Bank
IFSC ಕೋಡ್: KARB0000723
PhonePe / GPay / UPI ID: 8281096325@kbl
ಸಂಪರ್ಕ: 7561850329
ಮಾನವೀಯತೆ ಮೆರೆದು ನಿಮ್ಮ ಪುಟ್ಟ ಸಹಾಯವೂ ಇವರ ಬದುಕು ಉಳಿಸಲು ದೊಡ್ಡ ಸಹಾಯವಾಗಬಹುದು.