ಮಂಗಳೂರು: ಆಪರೇಷನ್ ಸಿಂಧೂರದ ವಿಜಯೋತ್ಸವ; ನಾಳೆ (ಮೇ 20)ಸಂಜೆ 3ಕ್ಕೆ ಮಂಗಳೂರು ಕರಾವಳಿ ಮೈದಾನದಲ್ಲಿ ಬೃಹತ್ ಮೆರವಣಿಗೆ! ಬನ್ನಿ, ಭಾಗವಹಿಸಿ!

  • 19 May 2025 09:01:19 PM


ಮಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ಸನಾತನ ಹಿಂದೂ ಧರ್ಮದ ಮೇಲೆ ಪಾಕಿಸ್ತಾನಿ ಭಯೋತ್ಪಾದಕರಿಂದ ನಡೆದ ಕ್ರೂರ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರವಾಗಿ ಭಾರತ ಸರ್ಕಾರ ಮತ್ತು ಭಾರತೀಯ ಸೇನೆ ನಡೆಸಿದ "ಆಪರೇಷನ್ ಸಿಂಧೂರ" ಕಾರ್ಯಾಚರಣೆಯ ಮಹಾವಿಜಯದ ಅಂಗವಾಗಿ "ಬೃಹತ್ ವಿಜಯೋತ್ಸವ ಮೆರವಣಿಗೆ" ದಿನಾಂಕ 20.5.2025 ಮಂಗಳವಾರ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಲಾಗಿದೆ.

 

ಸಂಜೆ 3:00 ಗಂಟೆಗೆ ಆರಂಭಗೊಳ್ಳುವ ಈ ಮಹತ್ವಪೂರ್ಣ ದೇಶಭಕ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಷ್ಟ್ರಕ್ಕೆ ನಿಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕಾಗಿ ಎಲ್ಲಾ ಜಾತಿ, ಮತ, ಪಂಥ, ರಾಜಕೀಯ ಪಕ್ಷ ಭೇದ ಮರೆತು ಭಾಗವಹಿಸಬೇಕಾಗಿ ವಿನಂತಿ.

 

ವಿ.ಸೂ.: ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಂಧುಗಳು ಹಾಗೂ ಕಾರ್ಯಕರ್ತರಿಗಾಗಿ ಅಡ್ಯನಡ್ಕದಿಂದ ಮಂಗಳೂರಿಗೆ ಮಧ್ಯಾಹ್ನ 1:00 ಗಂಟೆಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

 

ಬನ್ನಿ, ಭಾಗವಹಿಸಿ – ದೇಶಕ್ಕಾಗಿ, ಸರಕಾರಕ್ಕಾಗಿ, ನಮ್ಮ ವೀರ ಸೈನಿಕರಿಗಾಗಿ ಧೈರ್ಯ ತುಂಬಿ, ಒಂದು ದಿನದ ಸಮಯ ನೀಡಿ.

ಜೈ ಹಿಂದ್! ಜೈ ಭಾರತ್ ಮಾತಾ!

ವಂದೇ ಮಾತರಂ!