ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನೌಷಾದ್ ಯಾನೇ ಚೊಟ್ಟೆ ನೌಷಾದ್ ಮೇಲೆ ಸೋಮವಾರ ಸಂಜೆ ಹಲ್ಲೆ ಯತ್ನ ನಡೆದಿದೆ.
ನ್ಯಾಯಾಲಯದಲ್ಲಿ ನ್ಯಾಯಾಂಗ ಬಂಧನ ವಿಧಿಸಿದ್ದ ನಂತರ ನೌಷಾದ್ನನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲಿದ್ದು ಈ ನಡುವೆ Jailನಲ್ಲಿ ಆತನ ಮೇಲೆ ಇತರ ಕೈದಿಗಳಿಂದ ದಾಳಿ ನಡೆದಿದೆ.
ಪೊಲೀಸ್ ಕಸ್ಟಡಿಯಿಂದ ಬಿಡುಗಡೆಯಾದ ನೌಷಾದ್, ಜೈಲಿನಲ್ಲಿ ಯಾರನ್ನೋ ಭೇಟಿಯತ್ನಿಸಿದ್ದು, ಈ ವೇಳೆ ಮತ್ತೊಬ್ಬ ಕೈದಿಯನ್ನು ಭೇಟಿಗೆ ಕರೆದುಕೊಂಡು ಹೋಗಲಾಗಿತ್ತು. ಆ ಸಂದರ್ಭದಲ್ಲಿ Jailನಲ್ಲಿ ಇದ್ದ ಕೆಲವು ಕೈದಿಗಳು ನೌಷಾದ್ನನ್ನು ನೋಡಿ ಕಲ್ಲು ಹಾಗೂ ಇತರ ವಸ್ತುಗಳನ್ನು ಎಸೆದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಆದರೆ ನೌಷಾದ್ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಅಪಾಯದಿಂದ ಪಾರಾಗಿದ್ದಾನೆ.
ಈ ಘಟನೆ ಸಂಬಂಧವಾಗಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣದ ಕ್ರಮವಾಗಿ ನೌಷಾದ್ನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿದೆ. ಕಳೆದ ವಾರ ಸುಹಾಸ್ ಹತ್ಯೆ ಪ್ರಕರಣದ ಸಂಬಂಧ ನೌಷಾದ್(39) ಅಲ್ಲದೆ ಅಜರುದ್ದೀನ್(29) ಅಬ್ದುಲ್ ಖಾದರ್ (24) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.