ಬಜ್ಪೆ: ಬಜ್ಪೆ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆಯ ವಿರುದ್ಧ ರಾಜ್ಯದ ಹಿಂದು ಸಂಘಟನೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹತ್ಯೆ ಖಂಡಿಸಿ ಮತ್ತು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಲು ಒತ್ತಾಯಿಸಿ, ವಿಶ್ವ ಹಿಂದೂ ಪರಿಷತ್ ಮೇ 25 ಭಾನುವಾರ “ಬಜ್ಪೆ ಚಲೋ” ಕಾರ್ಯಕ್ರಮಕ್ಕೆ ಕರೆ ನೀಡಿದೆ.
ಮಂಗಳೂರು ವಿಭಾಗದ ಹಿಂದು ಜಾಗರಣ ವೇದಿಕೆ ಈ ಪ್ರತಿಭಟನಾತ್ಮಕ ಸಭೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಪ್ರತಿಭಟನೆ ಮೇ 25, ಭಾನುವಾರ ಸಂಜೆ 3 ಗಂಟೆಗೆ, ಬಜ್ಪೆ ಜಂಕ್ಷನ್ ಬಳಿಯ ಶಾರದಾ ಮಂಟಪದಲ್ಲಿ ನಡೆಯಲಿದೆ.
ಹಿಂದೂ ಸಂಘಟನೆಗಳ ಹಲವಾರು ನಾಯಕರು, ಹಿಂದೂ ಸಮಾಜದ ಬಂಧುಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ನ್ಯಾಯಕ್ಕಾಗಿ ಶಕ್ತಿಯಾಗಿ ತಮ್ಮ ಧ್ವನಿ ಎತ್ತಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.