ಕಾಸರಗೋಡು : ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೆರ್ಲದಲ್ಲಿ ಕಾರ್ಯನಿರ್ವಹಿಸುತ್ತಿರುವ ನಳಂದ ಚಾರಿಟೇಬಲ್ ಟ್ರಸ್ಟ್ (ರಿ), ಶಿಕ್ಷಣ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಮುಂದುವರಿಸುತ್ತಿದೆ.
ಪರಿಸರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣದ ಅವಕಾಶ ನೀಡುತ್ತಿರುವ ಈ ಸಂಸ್ಥೆಯು ಇದೀಗ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಶ್ರೇಷ್ಠ ಅವಕಾಶ ಕಲ್ಪಿಸಲು ಮುಂದಾಗಿರುತ್ತದೆ.
ಈ ಶೈಕ್ಷಣಿಕ ವರ್ಷದಲ್ಲಿಯೂ ಪ್ಲಸ್ ಟು ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಪದವಿಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವ ಆದರೆ ಹಣಕಾಸಿನ ಅಡಚಣೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಮತ್ತು ಸಹಾಯಧನವನ್ನು ನೀಡುವ ಮೂಲಕ ನಳಂದ ಟ್ರಸ್ಟ್ ಕೈ ಜೋಡಿಸಿದೆ.
ಶಿಕ್ಷಣವು ಎಲ್ಲರಿಗೂ ಲಭ್ಯವಿರಬೇಕು ಎಂಬ ದೃಷ್ಟಿಕೋನದಿಂದ, ಈ ಪರಿಹಾರ ಕ್ರಮ ಜಾರಿಯಲ್ಲಿದೆ.
ಆರ್ಥಿಕ ತೊಂದರೆಯಿಂದ ಬದುಕಿನ ಪ್ರಗತಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ, ಸಂಸ್ಥೆಯ ಈ ತೀರ್ಮಾನ ಶ್ಲಾಘನೀಯವಾಗಿದೆ.
ಶುಲ್ಕ ರಿಯಾಯಿತಿ ಸಂಬಂಧಿತ ಅರ್ಹತೆಗಳು ಟ್ರಸ್ಟ್ನ ನಿರ್ಧಾರಕ್ಕೆ ಒಳಪಟ್ಟಿರುತ್ತವೆ. ಆಸಕ್ತ ವಿದ್ಯಾರ್ಥಿಗಳು ತಕ್ಷಣವೇ ನಳಂದ ಸಂಸ್ಥೆಯನ್ನು ಸಂಪರ್ಕಿಸಬಹುದು.
ಸಂಪರ್ಕ ಸಂಖ್ಯೆ: 9446803092 / 9447394969.