ಕಾಸರಗೋಡು: “ಮಾನವ ಸೇವಾ ಮಾಧವ ಸೇವೆ” ಎಂಬ ಧ್ಯೇಯವಾಕ್ಯವನ್ನು ಮುಂಚೂಣಿಗೆ ಇಟ್ಟುಕೊಂಡು ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೂಡ್ಲು ಪಚ್ಚಕ್ಕಾಡಿನಲ್ಲಿ ನಿರ್ಮಿಸಲಾದ ಹೊಸ ಮನೆಯ ಕೀಲಿ ಕೈಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಸರಗೋಡು ಜಿಲ್ಲಾ ಸಂಘಚಾಲಕರಾದ ಪ್ರಭಾಕರ್ ಮಾಸ್ತರ್ ರವರು ಬಲಿದಾನಿ ಸಂಧೀಪ್ ರವರ ತಾಯಿ ವೀಣಾ ಕುಮಾರಿ ಹಾಗೂ ಅವರ ಪುತ್ರಿಗೆ ಹಸ್ತಾಂತರಿಸಿದರು.
ಈ ವಿಶೇಷ ಸಮಾರಂಭದಲ್ಲಿ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಅಡ್ವ ಪಿ ಮುರಳೀಧರನ್, BMS ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕಣಿ. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು, BMS ಜಿಲ್ಲಾ ಜೊತೆ ಕಾರ್ಯದರ್ಶಿ ಪಿ.ದಿನೇಶ್ ಬಂಬ್ರಾಣ, ಗೀತಾ ಬಾಲಕೃಷ್ಣನ್ ಬೆಳ್ಳೂರು,ಗುರುದಾಸ್ ಮಧೂರು, ಹರೀಶ್ ಕುದ್ರೆಪ್ಪಾಡಿ., ಬಿಎಂಎಸ್ ಕಾಸರಗೋಡು ಪ್ರಾದೇಶಿಕ ಅಧ್ಯಕ್ಷರಾದ ಬಾಲಕೃಷ್ಣನ್ ನೆಲ್ಲಿಕುನ್ನು, ಕಾರ್ಯದರ್ಶಿ ಬಾಬುಮೋನ್ ಚೆರ್ಕಳ. ಭಾಸ್ಕರನ್ ಪೊಯಿನಾಚಿ. ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ, ಗೋಪಾಲಕೃಷ್ಣನ್, ಬಿಜೆಪಿ ನಗರಸಭೆ ವಿರೋಧ ಪಕ್ಷದ ನಾಯಕ ಪಿ ರಮೇಶ್ ವಾರ್ಡ್ ಸದಸ್ಯ. ರಾಧಾ ಪಚ್ಚಕ್ಕಾಡ್, ಶ್ರೀಲತ ಟೀಚರ್ ,ಮೊದಲಾದವರು ಉಪಸ್ಥಿತರಿದ್ದರು.