ಮಂಗಳೂರು : ಮನಾಪಾ ಕಸ ಸಾಗಿಸುವ ಲಾರಿಗಳಿಂದ ರಸ್ತೆ ಬಳಕೆದಾರರು ದಿನೇದಿನೆ ತೊಂದರೆಗೆ ಒಳಗಾಗುತ್ತಿದ್ದಾರೆ.
ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕಡದೆ ಸಾಗುವ ಈ ಲಾರಿಗಳು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸುತ್ತವೆ. E ಸಂದರ್ಭದಲ್ಲಿ ಅವುಗಳಿಂದ ಬೀರುವ ದುರ್ವಾಸನೆ ಕೊಳಚೆ ನೀರು ರಸ್ತೆಗಳ ಮೇಲೆ ಹರಿದು ಸಾರ್ವಜನಿಕರಿಗೆ ತೀವ್ರ ಅಸ್ವಸ್ಥತೆಯನ್ನು ಉಂಟುಮಾಡುತ್ತಿದೆ.
ವಿಶೇಷವಾಗಿ ಪದವಿನಂಗಡಿಯಿಂದ ಪಚ್ಚನಾಡಿಗೆ ತಿರುಗುವ ರಸ್ತೆಯಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು ಲಾರಿಗಳ ಎರಡೂ ಬದಿಗಳಿಂದ ಹರಿದುಬರುವ ನೀರಿನಿಂದ ರಸ್ತೆ ಜಾರುವಂತಾಗುತ್ತಿದೆ. ಈ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರರು ಅತೀವ ಅಪಾಯಕ್ಕೊಳಗಾಗುತ್ತಿದ್ದಾರೆ ಎನ್ನಲಾಗಿದೆ.
ಕೊಳಚೆ ನೀರಿನಿಂದ ಸ್ಕಿಡ್ ಆಗುವ ಅಪಾಯವಿದ್ದು, ಅಪಘಾತಗಳ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೆ, ನಗರಾದ್ಯಂತ ಹರಡುವ ದುರ್ವಾಸನೆ ಸಾರ್ವಜನಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ.
ಈಗಾಗಲೇ ಸಾರ್ವಜನಿಕರಿಂದ ದೂರುಗಳು ಬಂದರೂ, ಸಂಬಂಧಿತ ಅಧಿಕಾರಿಗಳು ಈ ಕುರಿತು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ.
ಕಸ ಸಾಗಿಸುವ ಲಾರಿಗಳನ್ನು ಸಂಪೂರ್ಣವಾಗಿ ಮುಚ್ಚಿ, ನೀರು ಸೋರಿಕೆಯಾಗದಂತೆ ಸೀಲ್ ಮಾಡುವಂತಹ ತಕ್ಷಣದ ಕ್ರಮ ಅಗತ್ಯವಾಗಿಯುತ್ತದೆ.
ಈ ಸಮಸ್ಯೆಯ ಪರಿಹಾರವು ವಾಹನ ಸವಾರರ ಸುರಕ್ಷತೆಯ ಜೊತೆಗೆ ಮಂಗಳೂರಿನ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುತ್ತದೆ.