ಎಲ್ಲಿದೆ ನ್ಯಾಯ??.. ಎಲ್ಲಿದೆ ಕಾನೂನು??..

  • 15 May 2025 05:33:32 PM


*ಎಲ್ಲಿದೆ ನ್ಯಾಯ* ..... *ಎಲ್ಲಿದೆ ಕಾನೂನು..?* 

                                  ಇತ್ತೀಚಿನ ದಿನಗಳಲ್ಲಿ ಜೀವಗಳಿಗೆ ಬೆಲೆ ಇಲ್ಲದಂತೆ ಆಗಿದೆ, ನಮ್ಮ ದೇಶದ ಪ್ರಜೆಗಳನ್ನು ಕಾನೂನಿಂದ ನಿಯಂತ್ರಿಸಲು ಆಗುವುದಿಲ್ಲ ಅಂದ ಮೇಲೆ ಕಾನೂನು ಏಕೆ ಬೇಕು..? ಸ್ವಾತಂತ್ರ್ಯ ಸಿಕ್ಕ ಮೇಲು ಸ್ವಾತಂತ್ರ್ಯ ಎಲ್ಲಿದೆ.? ಪ್ರತಿವರ್ಷವು ಯಾವುದಕ್ಕೋಸ್ಕರ ಸ್ವಾತಂತ್ರ್ಯ ಆಚರಣೆ ಮಾಡುತ್ತೇವೆ.....

 

ಗಲ್ಲಿ ಗಲ್ಲಿ ಯಲ್ಲಿ ಹೆಣ ಬೀಳುತ್ತಾ ಇರುತ್ತೆ ಅದು ಸ್ವಾತಂತ್ರ್ಯನ? ಅವತ್ತು ಬ್ರಿಟಿಷರು ಬೇಕಾದಷ್ಟು ನಮ್ಮಿಂದ ಲೂಟಿ ಮಾಡಿ ಅವರಿಗೆ ಸಾಕು ಅನಿಸಿದಾಗ ಬಿಟ್ಟು ಹೊಂದ್ರು... ಅದನ್ನು ಸ್ವಾತಂತ್ರ್ಯ ಅಂದುಕೊಳ್ಳಲ್ಲ. ಯಾವಾಗ ಒಬ್ಬ ಯಾವ ವ್ಯಕ್ತಿ ಸ್ವತಂತ್ರವಾಗಿ ರಾತ್ರಿ ಓಡಾಡಲು ಧೈರ್ಯಬರುತ್ತದೋ ಮತ್ತು ಯಾವಾಗ ಬೀದಿ ಬೀದಿ ಯಲ್ಲಿ ಹೆಣ ಬೀಳುವುದು ನಿಲ್ಲುತ್ತದೆಯೋ ಆಗ ಸ್ವಾತಂತ್ರ್ಯ ಸಿಕ್ಕಿದೆ ಎಂದು ಅರ್ಥ.

 

ಅವತ್ತು ಅಂಬೇಡ್ಕರ್ ಕಾನೂನು ರಚನೆ ಮಾಡಿದರು... ಆದರೆ ಅದು ಅವತ್ತಿನ ಕಾಲದ ಜನರಿಗೆ...ಯಾಕೆಂದರೆ ಅವರಿಗೆ ಕಾನೂನು ಪೊಲೀಸ್ ಅಂದ್ರೆ ಭಯವಿತ್ತು. ಎಲ್ಲಿ ಮರ್ಯಾದೆ ಹೋಗುತ್ತೆ ಎಂಬ ಭಯವಿತ್ತು, ಈಗಿನ ಕಾಲದಲ್ಲಿ ಜನರಲ್ಲಿ ಕಾನೂನು ಮತ್ತು ಪೊಲೀಸ್ ಅಂದ್ರೆ ಭಯನೇ ಇಲ್ಲದಂತೆ ಆಗಿದೆ ಅಲ್ವಾ. ಪೊಲೀಸರಿಗೆ ಲಂಚ ಕೊಟ್ರೆ ಏನು ಬೇಕಾದರೂ ಮಾಡಲು ತಯಾರಿದ್ದಾರೆ ಅಲ್ವಾ....

 

ದೊಡ್ಡ ದೊಡ್ಡ ವ್ಯಕ್ತಿಗಳು ಕೊಲೆ ಮಾಡಿದರು ಅವರಿಗೆ ರಾಜಿಕೀಯ ವ್ಯಕ್ತಿಗಳು ರಿಯಾಯಿತಿ ಕೊಡುತ್ತಾರೆ.ಅಂತವರಿಗೆ ಅಭಿಮಾನಿ ಗಳು ಜಾಸ್ತಿ ಇರುತ್ತಾರೆ ಅಲ್ವಾ, ಅಂತವರನ್ನು ನೋಡಿ ಕಲಿ ಯುವರೇ ಜಾಸ್ತಿ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ರೇಪು ಮಾಡುವಂತಹ ಸ್ಥಿತಿ ಬಂದಿದೆ ಅಲ್ವಾ... ನಮ್ಮ ದೇಶದಲ್ಲಿ ಬಡವರಿಗೆ ನ್ಯಾಯ ಇನ್ನು ಇಲ್ಲದಂತವಾಗಿದೆ .ಅಧಿಕಾರಿಗಳ ರಾಜಕಾರಣಿಗಳಿಗೆ ಕುಟುಂಬ ಕೆ ಚೆನ್ನಾಗಿ ರಕ್ಷಣೆ ಕೊಡುತ್ತಾರೆ, ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಕೊಡುವುದು ನಾವು ಗಳು.... ಅಂದ ಗೆದ್ದ ಮೇಲೆ ಅವರ ಮಾತೆ ಬೇರೆ, ಒಂದು ಶ್ರೀಮಂತ ಅಪರಾಧಿ ಆದರೆ ಅವರನೇ ಹೇಗೆ ಬೇಕಾದರೂ ರಕ್ಷಣೆ ಮಾಡುತ್ತಾರೆ. ಅದರ ಜೊತೆಗೆ ಖಾಕಿ ಹಾಕಿಕೊಂಡು ಇರುವ ಪೊಲೀಸರು ಅಷ್ಟೇ.

 

ಖಾಕಿಗೆ ನಿಯತ್ತು ಇಲ್ಲದಂತೆ ಹಾಗಿದೆ ಬಡವರ ಮಕ್ಕಳು ರೆಪು ಮರ್ಡರ್ ಆಗಿದ್ದರೆ ಅದನ್ನು ಯಾರು ಕೇಳಲ ಅಲ್ವಾ, ಉಗ್ರರು ದೇಶದ ಹೊರಗಡೆ ಇದ್ದವರನು ಹೊಡೆದು ಹಾಕಿದರೆ ಸಾಕಾಗಲ್ಲ ದೇಶದ ಒಳಗಡೆ ಇದ್ದವರನ್ನು ಹೊಡೆದು ಉರುಳಿಸಿದಾಗ ಮಾತ್ರ ಪ್ರಜೆಗಳಲ್ಲಿ ಭಯ ಹುಟ್ಟಲು ಸಾಧ್ಯ. ಸಮಾನತೆ ಅಂದ ಮೇಲೆ ಎಲ್ಲರನ್ನು ಸಮಾನತೆ ಯಿಂದ ಕಾಣಬೇಕು, ಶ್ರೀಮಂತ ಬಡವರು ಅಂತ ತಾರತಮ್ಯ ಉಂಟು ಮಾಡುವುದೇ ರಾಜಕಾರಣಿ ಗಳು ಮತ್ತು ಅಧಿಕಾರಿ ಗಳು, ಉದಾರಣೆಗೆ ನಮ್ಮ ದೇಶದ ಸೈನಿಕರು ಉಗ್ರರಿಂದ ಲಂಚ ತೆಗೆದುಕೊಂಡು ದಾಳಿ ಮಾಡಿ ಅಂತ ಬಿಡುತ್ತಿದ್ದರೆ ನಮ್ಮ ಪರಸ್ಥಿತಿ ಏನು ಆಗುತ್ತಿತು ಅರ್ಥ ಮಾಡಿಕೊಳ್ಳಿ ನೀವುಗಳು ಲಂಚ ಗೋಸ್ಕರ ಕೆಲಸ ಮಾಡ್ತಾ ಇದ್ದೀರಿ, ಕಾನೂನು ಯಾವಾಗ ಬಲಿಷ್ಠ ಆಗುತ್ತೆ ಯು ಅವತ್ತೆ ಬಲಿಷ್ಠ ರಾಷ್ಟ್ರ ನಿರ್ಮಾಣ ವಾಗಲು ಸಾಧ್ಯ..

 

✍️ ರಾಕೇಶ್ ರೈ