ನಮ್ಮ ಮನೆಯಲ್ಲಿ ಸಂಭ್ರಮದ ನಡುವೆ ಕ್ಷಣಮಾತ್ರಕ್ಕೂ ಕರೆಂಟ್ ಹೋದರೆ...!

  • 30 May 2025 09:37:13 PM


ನಮ್ಮ ಮನೆಯಲ್ಲಿ ಸಂಭ್ರಮದ ಮಧ್ಯೆ ಅಥವಾ ಇನ್ನಾವುದೋ ಸಮಯದಲ್ಲಿ ಕೆಲವೊಮ್ಮೆ ಕ್ಷಣಮಾತ್ರಕ್ಕೂ ಕರೆಂಟ್ ಹೋದರೆ, ಕೆಲವರು ತಕ್ಷಣವೇ ಹೇಳುವ ಮಾತು ಒಂದಿದೆ– ಕರೆಂಟುದಕುಲು ಸೈತೇ ಪೋಯೆರ್ ಅಥವಾ ಕರೆಂಟಿನವರು ಸತ್ತೇ ಹೋದ್ರು ಅನಿಸುತ್ತದೆ ಎಂಬುದಾಗಿ....

 

ಇದು ಸುಮ್ಮನೊಂದು ಮಾತಲ್ಲ. ಇದರ ಹಿಂದೆ ಅವರ ಕೆಲಸದ ಗಂಭೀರತೆಯ ಬಿಂಬವಿದೆ – ಆದರೆ ನಾವು ಅದನ್ನು ಅರಿಯದೇ, ಸಾಮಾನ್ಯವಾಗಿ ಮಾತುಗಳನ್ನು ಅಡಿ ಬಿಡುತ್ತೇವೆ.

 

ನಾವು ತುಂಬಾ ಅಲ್ಪವಾಗಿ ಅವರ ಕುರಿತು ಯೋಚಿಸಿ ಬಾಯಿಗೆ ಬಂದ ಹಾಗೆ ಹೇಳಿ ಬಿಡುವುದು ಉಂಟು.

ವಾಸ್ತವದಲ್ಲಿ, ಈ ವಿದ್ಯುತ್ ಸಿಬ್ಬಂದಿ ತಮ್ಮ ಸಮಯವನ್ನೂ, ಶ್ರಮವನ್ನೂ, ಕೆಲವೊಮ್ಮೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿರುವವರು. ನಿಶ್ಚಿತ ಸಂಭ್ರಮದ ಸಮಯವಲ್ಲದೇ, ತೀವ್ರ ಮಳೆಯಲಿ, ಬಿಸಿಲಿನಲಿ, ನಡು ರಾತ್ರಿಯಲಿ ಸಹ – ಅವರು ಲೈನ್ ಏರಿ, ಕೊಡೆ ಹಿಡಿದು, ಬೆಂಕಿಯ ಲೈನ್‌ಗಳನ್ನು ಸರಿಪಡಿಸುತ್ತಾರೆ.

 

ಇವರು ಕೂಡ ನಮ್ಮಂತೆಯೇ... ಮನುಷ್ಯರೇ....

ಅವರಿಗೆ ಸಹ ಕುಟುಂಬ ಆಸೆ, ಜೀವನದಲ್ಲಿ ಕನಸುಗಳಿರುತ್ತದೆ . 

 

ಆದರೆ ಅವರು ಆಯ್ಕೆ ಮಾಡಿಕೊಂಡಿರುವ ಸೇವೆಯ ಹಾದಿಯಲ್ಲಿ ತಮ್ಮ ಇಚ್ಛೆಗಳಿಗಿಂತ ಸಮಾಜದ ಬೆಳಕು ಅವರಿಗೆ ಮುಖ್ಯವಾಗುತ್ತದೆ.

 

ಕೆಲವರು ಹೇಳಬಹುದು – “ಅವರು ಕೆಲಸ ಮಾಡ್ತಾರಲ್ಲ, ಸಂಬಳವೂ ಸಿಗ್ತದೆ.”

ಆದರೆ ಜೀವನವನ್ನು ಪಣಕ್ಕಿಟ್ಟು ಮಾಡುವ ಕೆಲಸಕ್ಕೆ ನೀಡುವ ಸಂಬಳಕ್ಕೆ ಮಿತಿಯೇನು? 

 

ನಾವು ಹಣದಲ್ಲಿ ಅಳೆಯಲಾಗದಂತಹ ಕಾಯಕವನ್ನು ಅವರು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ.ನಮ್ಮ ಮನೆ ಬೆಳಗಿಸುವ ವಿದ್ಯುತ್ ಹಕ್ಕಿಗೆ, ಅವರ ಜೀವನದ ತ್ಯಾಗವೇ ಬೆಳಕಾಗಿರುತ್ತದೆ.

 

ದಯವಿಟ್ಟು ಎಲ್ಲ ಕೆಲಸಕ್ಕೂ, ಎಲ್ಲ ಕಾರ್ಮಿಕರಿಗೂ ಗೌರವ ನೀಡಿ.

 

#RespectEveryWorker #PowerMan ????