ಹೊಸಂಗಡಿ: ಮಂಜೇಶ್ವರದ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ 9ನೇ ವಾರ್ಷಿಕೋತ್ಸವವು ಇಂದು ಬೆಳಿಗ್ಗೆ ಹೊಸಂಗಡಿಯ ಪ್ರೇರಣಾ ಸಭಾಂಗಣದಲ್ಲಿ ಸರಳವಾಗಿ ಮತ್ತು ಮಾದರಿ ಕಾರ್ಯಕ್ರಮವಾಗಿ ನೆರವೇರಿತು. ಕಾರ್ಯಕ್ರಮವು ಆಶಾ ಲೋಕೇಶ್ ನೇತೃತ್ವದ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಉಪಾಧ್ಯಕ್ಷ ರೂಪೇಶ್ ಜೋಡುಕಲ್ಲು ಅವರು ಅತಿಥಿ ಹಾಗೂ ಭಾಗವಹಿಸಿದ ಸಮುದಾಯದ ಜನರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮವು ಅತಿಥಿಗಳ ದ್ವೀಪ ಜ್ವಾಲನೆಯಿಂದ ಉದ್ಘಾಟನೆ ಗೊಂಡಿತು.
ಬಳಿಕ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಎಲ್.ಕೆ. ಸುವರ್ಣ ಮಾತನಾಡಿ, “ಜೈ ಶ್ರೀ ರಾಮ್ ಸಂಸ್ಥೆ ಯುವ ಸಮಾಜಕ್ಕೆ ಪ್ರೇರಣಾದಾಯಕ ಮಾದರಿಯಾಗಿದ್ದು, ಇಂತಹ ಸಂಸ್ಥೆಗಳ ಸೇವಾ ಕೃತ್ಯಗಳು ಇತರರಿಗೆ ದಿಕ್ಕು ತೋರಿಸುತ್ತವೆ,” ಎಂದು ಶ್ಲಾಘಿಸಿದರು.
ಶ್ರೀ ವಿಜಯ ಪಂಡಿತ್, ಅಶ್ವಿನಿ YM, ಸುರೇಶ್ ಪಾಟ್ನಗಾರ್, ಸಚಿನ್ ಶೆಣೆಯಿ ಮತ್ತು ಬಾಲಕೃಷ್ಣ ಮಾಸ್ಟರ್ ಮುಂತಾದ ಗಣ್ಯರು ಪಾಲ್ಗೊಂಡು ಶುಭಾಶಯಗಳನ್ನು ಅರ್ಪಿಸಿದರು.
ಅಧ್ಯಕ್ಷತೆಯನ್ನು ನ್ಯಾ. ನವೀನ್ ರಾಜ್ ಅವರು ವಹಿಸಿ, ಸಂಸ್ಥೆಯ ಬೆಳವಣಿಗೆ ಮತ್ತು ಸಮಾಜಮುಖಿ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಕೃಷ್ಣ ಅಟ್ಟೆಗೋಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಖಜಾಂಚಿಯಾದ ಶ್ರೀ ನಂದ ಹೊಸಂಗಡಿ ಅವರು ಈ ಸಾಲಿನ ಲೆಕ್ಕಪತ್ರಗಳು ಹಾಗೂ ವರದಿ ಪ್ರಸ್ತುತಪಡಿಸಿದರು.
ಜೊತೆಗೆ, ಮಂಜೇಶ್ವರದ ಹತ್ತಕ್ಕೂ ಹೆಚ್ಚು ಶಾಲೆಗಳ 120 ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಧನ್ಯವಾದಗಳನ್ನು ಸಂಸ್ಥೆಯ ಸದಸ್ಯೆ ಸುಜಾತಾ ಟೀಚರ್ ಅವರು ಸಲ್ಲಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ವಿಖ್ಯಾತ್ ಸುಂಕದಕಟ್ಟೆ ನಿರ್ವಹಿಸಿದರು. ಕೊನೆಗೆ ಲಘು ಉಪಾಹಾರ ವಿತರಿಸಲಾಯಿತು
ಸಂಸ್ಥೆಯ ಸದಸ್ಯರ ತಂಡದ ಸಕ್ರಿಯತೆ ಹಾಗೂ ಸಹಕಾರದಿಂದ ಸಮಾರಂಭ ಯಶಸ್ವಿಯಾಗಿ ನೆರವೇರಿತು