ಕಾಸರಗೋಡು: ಆಟೋ ರಿಕ್ಷಾ ಮಜ್ಧೂರ್ ಸಂಘ (ಬಿ ಎಮ್ ಎಸ್ ) ಚೌಕಿ ಯೂನಿಟ್ ಸಮ್ಮೇಳನ 01/05/25 ಗುರುವಾರ ಬೆಳಗ್ಗೆ 10 ಗಂಟೆಗೆ ಸಿ.ಪಿ.ಸಿ.ಆರ್.ಐ ಕಾವುಗೋಳಿ ಶಿವ ದೇವಸ್ಥಾನದ ವಠಾರದಲ್ಲಿ ಜರಗಿತು.
ಯೂನಿಟ್ ಅಧ್ಯಕ್ಷರಾದ ಶ್ರೀ ದಯಾನಂದ ಚೌಕಿ ಕಡಪ್ಪರರವರು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದರು. ಆಟೋ ರಿಕ್ಷಾ ಮಜ್ಧೂರ್ ಸಂಘ ಜಿಲ್ಲಾ ಖಜಾಂಜಿ ಶ್ರೀ ಕುಞಿಕೃಷ್ಣನ್ ಅವರು ಉದ್ಘಾಟನೆಗೈಯ್ದು ಒಂದೆರಡು ಮಾತುಗಲನ್ನಾಡಿದರು.
ಯೂನಿಟ್ ಕಾರ್ಯದರ್ಶಿ ಶ್ರೀ ಯಧುಕುಲೇಶ್ ವಾರ್ಷಿಕ ವರಧಿ ವಾಚಿಸಿದರು. ಬಿ ಎಮ್ ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀ ಗುರುದಾಸ್ ಮಧೂರು ಸಮಾರೋಪ ಭಾಷಣ ಮಾಡಿದರು.
ಮುಂದಿನ ವರ್ಷಕ್ಕಿರುವ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮಧೂರು ಪಂಚಾಯತ್ 20 ನೇ ಸಿರಿಬಾಗಿಲು ವಾರ್ಡು ಸದಸ್ಯರಾದ ಶ್ರೀ ಉದಯ ಕುಮಾರ್ ಸಿ. ಯಚ್ ಸ್ವಾಗಟಿಸಿದರು. ಹೊಸ ಯೂನಿಟ್ ಕಾರ್ಯದರ್ಶಿ ಶ್ರೀ ರಂಜಿತ್ ರಾಮ್ ನಗರ ವಂದಿಸಿದರು.
ಹೊಸ ಸಮಿತಿ ಅಧ್ಯಕ್ಷರಾಗಿ ಶ್ರೀ ದಯಾನಂದ ಚೌಕಿ ಕಡಪ್ಪರ ಪುನರಾಯ್ಕೆಗೊಂಡರು. ಉಪಾಧ್ಯಕ್ಷರುಗಳಾಗಿ ಸತೀಶ್ ನೀರ್ಚಾಲ್, ಸಂದೇಶ್ ರಾಮ್ ನಗರ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ರಾಮ್ ನಗರ, ಜೊತೆ ಕಾರ್ಯದರ್ಶಿಗಳಾಗಿ ಚಂದ್ರಹಾಸ ನೀರಾಳ, ಮನುಪ್ರಸಾದ್ ನೀರ್ಚಾಲ್, ಕೋಶಾಧಿಕಾರಿಯಾಗಿ ಉದಯ ಬಿ ಆರ್.ಕಂಬಾರ್ ಆಯ್ಕೆಗೊಂಡರು.