ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತ್ವನಂ ಬಡ್ಸ್ ವಿಶೇಷ ಚೇತನರ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ವಿಜೃಂಭಣೆಯಿಂದ ಜರಗಿತು.
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಪಂ. ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಭಿ ಹನೀಫ್ ವಹಿಸಿದ್ದರು. ಜಿಲ್ಲಾಮಟ್ಟದ ಕುಟುಂಬಶ್ರೀ ಮಿಷನ್ನ ಎಡಿಎಂಸಿ ಕಿಶೋರ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಪಂ. ಸದಸ್ಯ ಮಹೇಶ್ ಭಟ್, ಕೆಎಸ್ಇಬಿ ಇಂಜಿನಿಯರ್ ರಾಜಗೋಪಾಲ್, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಸ್ನೇಹ ಕೌನ್ಸಿಲರ್ ಶೋಭಾ, ಸಮುದಾಯಿಕ ಕೌನ್ಸಿಲರ್ ಪ್ರಸೀತಾ, ರಾಜಾರಾಮ ಪೆರ್ಲ, ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸತ್ಯನಾರಾಯಣ ಪೆರ್ಲ ಮತ್ತು ಕಿಶನ್ ಕುಮಾರ್ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲೆ ಮರಿಯಾಂಬಿ ಸಮಾರಂಭಕ್ಕೆ ಸ್ವಾಗಟಿಸಿದರು. ಸ್ಪೆಷಲ್ ಎಜುಕೇಟರ್ ಆದ ಚೈತ್ರ ಅವರು ವಂದಿಸಿದರು.