ಪೆರ್ಲ: ಮಣಿಯಂಪಾರೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭ ಭಕ್ತಿಭಾವಪೂರ್ಣವಾಗಿ ಜರಗಿತು.
ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಅರೆಮಂಗಿಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ವರ್ಷಗತ ಲೆಕ್ಕಪತ್ರ ಹಾಗೂ ಕಾರ್ಯವಿವರಣೆ ವರದಿ ಮಂಡಿಸಲಾಯಿತು.
ನಂತರ 2024-25ನೇ ಸಾಲಿನ ನೂತನ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು.
ಆಯ್ಕೆಯಾದ ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಆನಂದ ನಾಯ್ಕ ಅರೆಮಂಗಿಲ ಆಯ್ಕೆಯಾದರು.
(ಉಪಾಧ್ಯಕ್ಷರು)ಉಮೇಶ್ ಎಂ, ವಿಜಯ ಮಣಿಯಂಪಾರೆ, (ಕಾರ್ಯದರ್ಶಿ)ವಸಂತ ಎನ್ (ಪ್ರಧಾನಜತೆ ಕಾರ್ಯದರ್ಶಿ) ರವಿ ಆಳ್ಚಾರ್, ಜಯಾನಂದ ಎ, (ಕೋಶಾಧಿಕಾರಿ) ಪ್ರಶಾಂತ್ ಎನ್,
(ಲೆಕ್ಕಪರಿಶೋಧಕ) ನೇಮಿರಾಜ್ ಎ ಆಯ್ಕೆಯಾದರು.