ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಮತ್ತು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಪುತ್ತೂರು ಇವುಗಳ ಆಶ್ರಯದಲ್ಲಿ ಆಗಸ್ಟ್ 8, 2025 (ಶುಕ್ರವಾರ) ರಂದು ನಡೆಯಲಿರುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ನೇತೃತ್ವದ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಜೂನ್ 8, 2025 ರಂದು ಪುತ್ತೂರಿನ ಸುಭದ್ರಾ ಕಲಾ ಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಮಿತಿಗೆ ಗೌರವಾಧ್ಯಕ್ಷರಾಗಿ ಶ್ರೀಮತಿ ರಜತಾ ಗಿರೀಶ್ ಭಟ್ ನೇಮಕವಾಗಿದ್ದು, ಗೌರವ ಸಲಹೆಗಾರರಾಗಿ ಶ್ರೀಮತಿ ಶಾರದಾ ಪ್ರಭು ಮತ್ತು ಶ್ರೀಮತಿ ಕಿಶೋರಿ ಕಿಶೋರ್ ಆಯ್ಕೆಯಾದರು. ಸಮಿತಿಯ ಸಂಚಾಲಕರಾಗಿ ಶ್ರೀಮತಿ ಪುಷ್ಪ ರಾಜೇಶ್, ಅಧ್ಯಕ್ಷರಾಗಿ ಶ್ರೀಮತಿ ಪ್ರೇಮಾ ರೈ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಅನ್ನಪೂರ್ಣ ಬಲ್ಲಾಳ್ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶ್ರೀಮತಿ ಪವಿತ್ರ, ಶ್ರೀಮತಿ ವೀಣಾ, ಶ್ರೀಮತಿ ಸ್ಮಿತಾ, ಶ್ರೀಮತಿ ಪ್ರೇಮ ಮುಂಡೂರು, ಶ್ರೀಮತಿ ರಾಜೀವಿ ಸೇರಿದಂತೆ ಅನೇಕರು ಜವಾಬ್ದಾರಿ ಸ್ವೀಕರಿಸಿಕೊಂಡರು.
ಕಾರ್ಯದರ್ಶಿಗಳಾಗಿ ಶ್ರೀಮತಿ ಪುಷ್ಪ ಆಚಾರ್ಯ, ಶ್ರೀಮತಿ ಸ್ವಾತಿ, ಶ್ರೀಮತಿ ವಿನಯ, ಶ್ರೀಮತಿ ಅರುಣಾ, ಶ್ರೀಮತಿ ತಾರಾ ಬಲ್ಲಾಳ್, ಶ್ರೀಮತಿ ಶ್ವೇತಾ ಮತ್ತು ಇತರ 50 ಕ್ಕೂ ಹೆಚ್ಚು ಮಹಿಳಾ ಸದಸ್ಯರ ನೇಮಕ ಮಾಡಲಾಯಿತು.
ಈ ಆಯ್ಕೆ ಸಮಾರಂಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕರಾದ ಶ್ರೀ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾದ ಶ್ರೀ ಮಹೇಂದ್ರವರ್ಮ ಬಜತ್ತೂರು, ನಿರ್ದೇಶಕರಾದ ಶ್ರೀ ಉಮೇಶ್ ಗೌಡ ಕೋಡಿಬೈಲು, ಶ್ರೀ ಅನಿಲ್ ಗೌಡ ತೆಂಕಿಲ, ಹಾಗೂ ಪದಾಧಿಕಾರಿಗಳಾದ ಮನೀಶ್, ಹರೀಶ್ ಮರುವಾಳ, ಸುಜಿತ್ ಕಜೆ, ಗಣೇಶ್ ಮುಕ್ರಂಪಾಡಿ, ಉದಯ ಬಲ್ಲಾಳ್, ಗಿರೀಶ್ ನರಿಮೊಗರು, ಹರೀಶ್ ಮುಂಡೂರ್, ಪ್ರವೀಣ್ ಶೆಟ್ಟಿ ತಿಂಗಳಾಡಿ, ಮಂಜುನಾಥ ಕೆದಂಬಾಡಿ, ಮಹಾಬಲ ಕೆಮ್ಮಾಯಿ, ಶ್ಯಾಮ್ ರಕ್ತೇಶ್ವರಿ, ಜಯಂತ ರಕ್ತೇಶ್ವರಿ, ಕಿಶೋರ್ ನಗರ ಇನ್ನಿತರರು ಉಪಸ್ಥಿತರಿದ್ದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾದ ರವಿಕುಮಾರ್ ರೈ ಕೆದಂಬಾಡಿ ಮಠ ಅವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.