ಪಾಣಾಜೆ: ಕಡಮಾಜೆಯ ಸುಬೋಧ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ರಾಕೇಶ್ ರೈ ಅವರು ಸಾಮಾಜಿಕ ಸೇವೆಯ ಮಾದರಿಯಾಗಿದ್ದಾರೆ.
ಅವರು ಸೈಕಲ್ ಅಭಿಯಾನದ ಮೂಲಕ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ತಮ್ಮ ಪ್ರೌಢಶಾಲೆಯ ಕಂಪ್ಯೂಟರ್ ಲ್ಯಾಬ್ನ್ನು ಸಂಪೂರ್ಣ ನವೀಕರಿಸಿರುತ್ತಾರೆ.
ಇವರ ಸಾಂಸ್ಕೃತಿಕ, ಸಾಂಘಿಕ ನಿಷ್ಠೆಯನ್ನು ಶಾಲಾ ಆಡಳಿತ ಮಂಡಳಿಯು ಪ್ರಶಂಸಿಸಿದೆ.
ಈ ನಿಟ್ಟಿನಲ್ಲಿ, ರಾಕೇಶ್ ರೈ ಅವರನ್ನು ಅವರ ತಂದೆ ಮತ್ತು ತಾಯಿಯವರೊಂದಿಗೆ ಸನ್ಮಾನಿಸಲಾಯಿತು.
ಶಾಲೆಯ ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.