ಉಳ್ಳಾಲ: ಟೀಮ್ ಕಲ್ಕಿ (ರಿ) ಉಳ್ಳಾಲ ಹಾಗೂ ಟೀಮ್ ಕಲ್ಕಿ ಸೇವಾ ಬಿಗ್ರೇಡ್ ಉಳ್ಳಾಲ ಇದರ ವತಿಯಿಂದ ದಿ. ಸುಹಾಸ್ ಶೆಟ್ಟಿ ಅವರ ಸ್ಮರಣಾರ್ಥವಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಮೂಲಕ ದಿ. ಸುಹಾಸ್ ಶೆಟ್ಟಿಯ ಸ್ಮೃತಿಗೆ ಗೌರವ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಖಿಲ್ ಶೆಟ್ಟಿ, ಭವಿಶ್ ಶೆಟ್ಟಿ, ಕಿರಣ್ ಜೋಗಿ, ಪವನ್ ಕುಮಾರ್, ಶರತ್, ಯತೀಶ್ ಉಲ್ಲಾಳ್, ಶರತ್ ಮಿಜಾರ್, ಮಧು ಶೆಟ್ಟಿ, ಪುನೀತ್ ವಾಮಂಜೂರು, ಪವನ್ ಬಂಜನ್, ಮನೀಶ್ ಶೆಟ್ಟಿ, ನಿಶಾಂತ್ ಉಜಿರೆ, ರಂಜಿತ್, ಫರಜ್, ಕವನ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.