ಮಂಗಳೂರು: ರಾಷ್ಟ್ರ ರಕ್ಷಣೆಯಲ್ಲಿ ಕರುನಾಡ ವೀರರು – ಭಾಗ ೧ ಪುಸ್ತಕ ಬಿಡುಗಡೆ: ಮಂಗಳೂರಿನಲ್ಲಿ ಭವ್ಯ ಕಾರ್ಯಕ್ರಮ ಯಶಸ್ವಿ!

  • 23 Jun 2025 03:18:26 PM


ಮಂಗಳೂರು: ರಾಷ್ಟ್ರಭಕ್ತ ನಾಗರಿಕ ವೇದಿಕೆ (ರಿ.) ಸುರತ್ಕಲ್ ಸಂಸ್ಥೆಯ ಮನವಿಯ ಮೇರೆಗೆ ಕ್ರಿಷ್ ವಟಿ ರಚಿಸಿರುವ ರಾಷ್ಟ್ರ ರಕ್ಷಣೆಯಲ್ಲಿ ಕರುನಾಡ ವೀರರು – ಭಾಗ ೧ ಪುಸ್ತಕದ ಬಿಡುಗಡೆ ಸಮಾರಂಭವು ಮಂಗಳೂರಿನಲ್ಲಿ ವಿಜೃಂಭಣೆಯಿಂದ ಜರಗಿತು.

 

ಈ ಗ್ರಂಥವನ್ನು ಬ್ರಿಗೇಡಿಯರ್ ಐ. ಎನ್. ರೈ ಅವರು ಅನಾವರಣಗೊಳಿಸಿದರು.

 

 

 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ವಹಿಸಿದ್ದರು. 

 

ಈ ಸಂದರ್ಭದಲ್ಲಿ ವಿಶೇಷ ಅಥಿತಿ ಗಳಾಗಿ ಲಯನ್ ಜಯರಾಜ್, ಪ್ರಕಾಶ್, ಸರ್ಜಾಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಸಮಾಜಸೇವಕಿ ಪ್ರಭಾ ಕಾಮತ್ ಹುಂಡಿ ಹಾಗೂ ಮಹಾಬಲ ಪೂಜಾರಿ ಅವರು ಉಪಸ್ಥಿತರಿದ್ದರು.

 

ಸಮಾರಂಭದಲ್ಲಿ ಮಾತನಾಡಿದ ಬ್ರಿಗೇಡಿಯರ್ ಐ. ಎನ್. ರೈ, ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಥವಾ ನಿಷ್ಕಪಟ ಸೇವೆ ಸಲ್ಲಿಸಿದ ಕರ್ನಾಟಕದ ವೀರರನ್ನು ಪರಿಚಯಿಸುವ ಈ ಪುಸ್ತಕ ಹೊಸ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಕಾರ್ಯಕ್ರಮವನ್ನು ಸಂಯೋಜಿಸಿ, ಆತಿಥ್ಯ ವಹಿಸಿ, ಧನ್ಯವಾದ ಅರ್ಪಿಸಿದರು.

 

ಈ ಸಮಾರಂಭದಲ್ಲಿ ಹಲವು ಸಾಹಿತ್ಯಾಭಿಮಾನಿಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಪುಸ್ತಕದ ಉದ್ದೇಶ ಹಾಗೂ ಅದರ ಮಹತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.